Tuesday, September 17, 2024

ನಟ ದರ್ಶನ್ ಕ್ರೌರ್ಯ: ರೇಣುಕಾಸ್ವಾಮಿ  ಪೋಸ್ಟ್​ಮಾರ್ಟಂ ಮಾಡಿದ ವೈದ್ಯರೇ ಶಾಕ್

ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರ ಕೈ ಸೇರಿದೆ.  ದರ್ಶನ್ ಆ್ಯಂಡ್ ಗ್ಯಾಂಗ್​ನಿಂದ ಕೊಲೆಯಾದ ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ಮಾಡಿದ ವೈದ್ಯರೇ ಶಾಕ್ ಆಗಿದ್ದಾರೆ. ಸುಮನಹಳ್ಳಿ ಮೋರಿ ಬಳಿ ಸಿಕ್ಕ ರೇಣುಕಾಸ್ವಾಮಿ ದೇಹವನ್ನ ಅದಾಗಲೇ ಶ್ವಾನಗಳು ಎಳೆದಾಡಿ ಮುಖದಲ್ಲಿನ ಮಾಂಸವನ್ನೇ ತಿಂದಿದ್ವು. ಆದ್ರೆ ಈ ಶ್ವಾನಗಳನ್ನೂ ಮೀರಿಸುವಂತೆ ದರ್ಶನ್ ಆ್ಯಂಡ್ ಗ್ಯಾಂಗಿನ ತೋಳಗಳು ಅವನ ದೇಹದ ಇಂಚಿಚಿನಲ್ಲೂ ಗಾಯ ಮಾಡಿದ್ರು. ರೇಣುಕಾಸ್ವಾಮಿಯ ಕಣಕಣಕ್ಕೂ ಹಿಂಸೆ ಕೊಟ್ಟು ಸಾಯಿಸಿದ್ದಾರೆ.

ರೇಣುಕಾಸ್ವಾಮಿಯ ಮರಣೋತ್ತರರ ಪರೀಕ್ಷೆಯ ರಿಪೋರ್ಟ್ ಆತನಿಗೆ ನೀಡಿದ ಸಕಲ ಹಿಂಸೆಗಳು ಎಂತೆಂಥವು ಅನ್ನೋದನ್ನ ಸಾರಿ ಸಾರಿ ಹೇಳ್ತಾ ಇವೆ. ಬಡಕಲು ಆಸಾಮಿ ರೇಣುಕಾಸ್ವಾಮಿ ದರ್ಶನ್​ನ ದೈತ್ಯ ಗ್ಯಾಂಗಿನ ಎದುರು ಹೇಗೆ ಪತರುಗುಟ್ಟಿ ಪ್ರಾಣಬಿಟ್ಟ ಅನ್ನೋ ಕಥೆಯನ್ನ ತೆರೆದಿಡ್ತಾ ಇವೆ.

ರೇಣುಕಾ ಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್:

  • ಮರ್ಮಾಂಗಕ್ಕೆ ತುಳಿದ ಅಥವಾ ಬಲವಾಗಿ ಒದ್ದ ರೀತಿ ಗಾಯ
  • ಮೈಮೇಲೆ ಸಿಗರೇಟ್​​ನಿಂದ ಸುಟ್ಟ ಗಾಯಗಳು
  • ದೇಹದ ವಿವಿದ ಭಾಗಗಳಲ್ಲಿ ಎಲೆಕ್ಟ್ರಿಕ್ ಶಾಕ್
  • ದೇಹದ ವಿವಿದೆಡೆ 16 ಕಡೆ ಗಂಭೀರ ಗಾಯಗಳು
  • ತಲೆಯ ಹಿಂಭಾಗದಲ್ಲಿ ಬಲವಾಗಿ ಪೆಟ್ಟು
  • ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ, ಮೂಳೆಗಳು ಮುರಿದಿವೆ
  • ದವಡೆ ಭಾಗದಲ್ಲಿ ಬಿರುಕು ಬಿಟ್ಟಿದೆ
  • ಮುಖದ ಮೇಲೂ ಹಲ್ಲೆ ಗುರುತುಗಳಿವೆ.
  • ಬೆನ್ನು, ಕಾಲಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ

ಇದನ್ನೂ ಓದಿ: ಜೈನ ಧರ್ಮದವರ ಕ್ಷಮೆ ಕೇಳಿದ ಹಂಸಲೇಖ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿರೋ ಶಾಕಿಂಗ್ ಸಂಗತಿಗಳಿವು. ದೈತ್ಯರಂತಿರೋ ದರ್ಶನ್ ಗ್ಯಾಂಗಿನ ಹೊಡೆತಕ್ಕೆ ರೇಣುಕಾಸ್ವಾಮಿ ದೇಹದ ಮೂಳೆಗಳು ಮುರಿದು ಮೂರಾಬಟ್ಟೆಯಾಗಿವೆ. ದೇಹದ ವಿವಿದ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸಾಯುವ ಮುನ್ನ ಅನುಭವಿಸಿದ ಚಿತ್ರಹಿಂಸೆಯನ್ನ ಸಾರಿ ಹೇಳ್ತಾ ಇದೆ.

ಹೌದು, ನರಕದಲ್ಲಿ ಯಮಕಿಂಕರರು ಕೊಡೋ ಹಿಂಸೆಗಿಂತಲೂ ಒಂದು ಕೈ ಮೇಲೆ ಹಿಂಸೆ ಕೊಟ್ಟಿದೆ ದರ್ಶನ್ ಗ್ಯಾಂಗ್. ದರ್ಶನ್​​ ಪಡೆಯ ದೈತ್ಯರು ರೇಣುಕಾಸ್ವಾಮಿಯನ್ನ ಫುಟ್​​ಬಾಲ್ ಚೆಂಡಿನಂತೆ ಗೊಡೆಗೆ ಎತ್ತಿ ಎತ್ತಿ ಎಸೆದಿದ್ದಾರೆ. ವಾಹನದ ಮುಂಭಾಗಕ್ಕೆ ತಲೆಯನ್ನ ಜಜ್ಜಿದ್ದಾರೆ. ಕಾಲಿನಲ್ಲಿ ತುಳಿದಿದ್ದಾರೆ.

ಇಷ್ಟು ಹೊಡೆತ ತಿಂದೆ ಜೀವಶ್ಚವವಾಗಿದ್ದ ರೇಣುಕಾಸ್ವಾಮಿಗೆ ದರ್ಶನ್ ಬಂದ ಮೇಲೆ ಕೊಟ್ಟಿದ್ದೇ ಅಸಲಿ ಹಿಂಸೆ. ರೇಣುಕಾ ಸ್ವಾಮಿ ಪವಿತ್ರಾಗೆ ತನ್ನ ಮರ್ಮಾಂಗದ ಚಿತ್ರ ಕಳುಹಿಸಿ , ದರ್ಶನ್​ಗಿಂತ ತನ್ನದೇನು ಕಮ್ಮಿ ಇದೆ ಬಾ ಅಂತ ಕರೆದಿದ್ದನಂತೆ. ತನ್ನ ಗೆಳತಿಗೆ ಗುಪ್ತಾಂಗದ ಚಿತ್ರ ಕಳುಹಿಸಿದವನನ್ನ ಸುಮ್ಮನೇ ಬಿಡೋಕಾಗುತ್ತಾ. ಸೇಮ್ ಟು ಸೇಮ್ ಅಂತ ಸಿನಿಮಾದ ಟೋಪಿವಾಲನಂತೆ ದರ್ಶನ್ ಎಲೆಕ್ಟ್ರಿಕ್ ಶಾಕ್ ಕೊಡುವ ಐಡಿಯಾ ಮಾಡಿದ್ರು.

ಇದನ್ನೂ ಓದಿ: ಜೈಲಿನಲ್ಲಿ ನಟೋರಿಯಸ್​ ರೌಡಿ ಬರ್ತಡೆ ಆಚರಿಸಿದ ದರ್ಶನ್, ಬ್ಯಾರಕ್​ನಲ್ಲೇ ಭರ್ಜರಿ ಬಾಡೂಟ

ಧನರಾಜುನಿಂದ ಮೆಗ್ಗರ್ ತರಿಸಿಕೊಂಡಿದ್ದ ದರ್ಶನ್, ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಡೋದಕ್ಕೆ ಹೇಳಿದ್ನಂತೆ. ನಂದೀಶ್ ಮತ್ತು ಧನರಾಜು ಶಾಕ್ ಕೊಡ್ತಿದ್ರೆ ರೇಣುಕಾಸ್ವಾಮಿ ವಿಲ ವಿಲ ಒದ್ದಾಡ್ತಾ ಇದ್ದನಂತೆ. ಆತ ವಿಲವಿಲ ಒದ್ದಾಡ್ತಾ ಇದ್ರೆ ಇಲ್ಲಿ ದರ್ಶನ್ ಆ್ಯಂಡ್ ಪವಿತ್ರಾ ಕಿಲ ಕಿಲ ಅಂತ ನಗ್ತಾ ಎಂಜಾಯ್ ಮಾಡ್ತಾ ಇದ್ರಂತೆ.

ಈ ಕಿರಾತಕರು ತಾವು ಮಾಡಿದ  ಕೃತ್ಯವನ್ನ ಹೇಳ್ತಾ ಇದ್ರೆ, ಅದನ್ನ ಕೇಳಿ ಪೊಲೀಸರು ಶಾಕ್ ಆಗಿದ್ರು., ರೇಣುಕಾಸ್ವಾಮಿ ಡೆಡ್ ಬಾಡಿ ನೋಡಿ ವೈದ್ಯರೇ ಬೆಸ್ತುಬಿದ್ದಿದ್ರು. ಅಷ್ಟರ ಮಟ್ಟಿಗೆ ಹಿಂಸಾತ್ಮಕ ಕೃತ್ಯ ಮಾಡಿದೆ ದರ್ಶನ್ ಗ್ಯಾಂಗ್. ಇವರ ಕೃತ್ಯವನ್ನ ನೋಡಿದ ಮೇಲೂ ಇವರನ್ನ ಮನುಷ್ಯರು ಅಂತ ಯಾರು ತಾನೇ ಒಪ್ಪೋದಕ್ಕೆ ಸಾಧ್ಯ ನೀವೇ ಹೇಳಿ,. ಸದ್ಯ ಪೊಲೀಸರ ಕೈ ಸೇರಿರೋ ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ವರದಿ ಡಿ ಗ್ಯಾಂಗ್​​ನ ಕ್ರೌರ್ಯಕ್ಕೆ ಸಾಕ್ಷಿಯನ್ನುವಂತೆ ಇದೆ. ಮತ್ತು ಈ ವರದಿಗೆ ಡಿ ಗ್ಯಾಂಗ್​ ಕೊರಳಿಗೆ ಉರುಳು ಹಾಕುವಂತಿದೆ.

ಫಿಲಂ ಬ್ಯೂರೋ, ಪವರ್ ಟಿವಿ .

RELATED ARTICLES

Related Articles

TRENDING ARTICLES