ಯಾದಗಿರಿ: ಕಬ್ಬಿಣದ ರಾಡ್ ಹಾಗು ಚಾಕುವಿನಿಂದ ಪತ್ನಿ, ಅತ್ತೆ ಹಾಗು ಮಾವನನ್ನು ಅಳಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಬಳಿಯ ಸೈದಾಪುರ ಬಳಿ ನಡೆದಿದೆ.
ದಾವಣಗೆರೆ ಮೂಲದ ಅನ್ನಪೂರ್ಣ (25), ಕವೀತಾ (45), ಬಸವರಾಜಪ್ಪ (52) ಕೊಲೆಯಾದವರು. ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿ. ಕಳೆದ ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನ್ನು ನವೀನ್ ಮದುವೆಯಾಗುದ್ದ. ಈ ದಂಪತಿಗೆ ಒಂದು ಹೆಣ್ಣುಮಗು ಇದೆ.
ಇದನ್ನೂ ಓದಿ: ಓಮಿನಿ ಕಾರಿನ ಮೇಲೆ ಗುಡ್ಡ ಕುಸಿತ!
ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೆ ತವರು ಮನೆಗೆ ವಾಪಸ್ ಹೋಗಿದ್ದ ಅನ್ನಪೂರ್ಣ ತಂದೆ ತಾಯಿಯೊಂದಿಗೆ ವಾಸವಾಗಿದ್ದಳು. ಬುಧವಾರ ಗಂಡ ಕರೆ ಮಾಡಿ ಜೊತೆಗೆ ಇರೋಣ ಎಂದು ಕರೆದಿದ್ದಾನೆ. ನ್ಯಾಯಾ ಪಂಚಾಯ್ತಿ ಮಾಡಿ ಮತ್ತೆ ಜೊತೆಗಿರಲು ಪತಿ ಪತ್ನಿ ಮುಂದಾಗಿದ್ದರು.
ಇದರಂತೆ ಮಗಳನ್ನ ಗಂಡನ ಮನೆಗೆ ಬಿಡಲು ಅನ್ನಪೂರ್ಣ ಪೋಷಕರು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ ಮಾವನನ್ನ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಪತಿ ಪತ್ನಿ ಹೋಗಿದ್ದರು. ಈ ವೇಳೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಚಾಕುನಿಂದ ಚುಚ್ಚಿ ಅಳಿಯ ಕೊಲೆ ಮಾಡಿದ್ದಾನೆ. ಬಳಿಕ, ಕೊಲೆ ಮಾಡಿ ವಡಗೇರ ತಾಲೂಕಿನ ಜೋಳದಡಗಿ ಬಳಿ ಶವ ಬಿಸಾಡಿ ಹೋಗಿದ್ದಾನೆ. ಸದ್ಯ ಅನ್ನಪೂರ್ಣ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.