ಮಂಡ್ಯ: ಏಕಾದಶಿ ಪ್ರಯುಕ್ತ ದಿ.ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಫೋಟೋ ಮುಂದೆ ಅಭಿಮಾನಿ ಕುಟುಂಬ ಎಡೆ ಇಟ್ಟು ಸದ್ಗತಿ ಪೂಜೆ ಸಲ್ಲಿಸಿಸುವ ಘಟನೆ ನಡೆದಿದೆ.
ಆಷಾಡ ಮಾಸದ ಏಕಾದಶಿ ದಿನದಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿರುವ ಅಪ್ಪು ಅಭಿಮಾನಿ ಪ್ರತಾಪ್ ಮನೆಯಲ್ಲಿ ಪುನೀತ್ ರಾಜ್ ಕುಮಾರ್ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ. ಏಕಾದಶಿ ರಾತ್ರಿ ಮನೆಯಲ್ಲಿ ಅಪ್ಪು ಪೋಟೋ ಮುಂದೆ ಮನೆಯಲ್ಲಿ ತಯಾರಿಸಿದ್ದ ಅಡುಗೆ ಜೊತೆಗೆ, ಬಾದುಶಾ, ಜಿಲೇಬಿ, ಮೈಸೂರ್ ಪಾಕ್, ವಡೆ, ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಪರಸ್ತ್ರೀಯೊಂದಿಗೆ ಗಂಡ ರೊಮ್ಯಾನ್ಸ್: ಪತ್ನಿ ಕೈಗೆ ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿತ
ಈ ಭಾಗದಲ್ಲಿ ಏಕಾದಶಿ ದಿನದಂದು ಅಗಲಿದವರಿಗೆ ಎಡೆ ಇಟ್ಟು ಸದ್ಗತಿಗೆ ಪೂಜೆ ಸಲ್ಲಿಸುವ ಪ್ರತೀತಿ. ಈ ಹಿನ್ನೆಲೆ ತಮ್ಮ ನೆಚ್ಚಿನ ನಟ ಅಪ್ಪು ಮೇಲಿನ ಅಭಿಮಾನ ಇಟ್ಟುಕೊಂಡಿದ್ದ ಪ್ರತಾಪ್ ಕುಟುಂಬವು ಏಕಾದಶಿಯಂದು ಎಡೆ ಇಟ್ಟು ಸದ್ಗತಿ ಪೂಜೆ ಸಲ್ಲಿಸಿದ್ದಾರೆ.