ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯೋರ್ವ ಕಚೇರಿಯಲ್ಲಿಯೇ ಆತ್ಮಹತ್ಯೆ ಶರಣಾಗಿರುವ ಘಟನೆ ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ನಡೆದಿದೆ.
ಅಥಣಿ ಮೂಲದ ಮಹೇಶ್ (42) ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ, ಬೆಂಗಳೂರಿನ ಶಾಂತಿನಗರದ ಮೂರನೇ ಫ್ಲೋರ್ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಸ್ವಾಮಿ PM ರಿಪೋರ್ಟ್ ತಿರುಚೋ ಯತ್ನ ? ದರ್ಶನ್ ಗ್ಯಾಂಗ್ಗೆ ಗ್ರಿಲ್
ಮೃತ ಮಹೇಶ್ ಕುಡಿತಕ್ಕೆ ದಾಸನಾಗಿದ್ದ ಆದ್ದರಿಂದ ಇತ್ತೀಚೆಗೆ ಕುಟುಂಬದವರು ಕುಡಿತ ಬಿಡಿಸಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಬಳಿ ರೇಕಾರ್ಡ್ ರೂಂ ನ ಕೀ ಕೇಳಿ ಪಡೆದುಕೊಂಡಿದ್ದ, ಬೆಳಗ್ಗೆಯಿಂದ ಸಂಜೆಯ ವರೆಗೆ ಅಲ್ಲೇ ಓಡಾಡಿಕೊಂಡಿದ್ದ, ನೆನ್ನೆ ಸಂಜೆ ಕಚೇರಿಯಲ್ಲಿ ಯಾರು ಇಲ್ಲದ ವೇಳೆ ವೈಯರ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿದ್ದು ಪರಿಶಿಲನೆ ನಡೆಸಿದ್ದೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.