ಬೆಂಗಳೂರು: 23-2024ನೇ ಸಾಲಿನ SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ DYSP ರಾಜೇಶ್ ಶಿಕ್ಷಕರಾಗಿ ಸ್ಪೆಷಲ್ ಕ್ಲಾಸ್ ತೆಗೆದೆಕೊಂಡಿದ್ದರು, ಸ್ಪೆಷಲ್ ಕ್ಲಾಸ್ಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಪಾಸ್ ಆಗಿದ್ದು ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
23-2024ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಮಕ್ಕಳಿಗೆ ಮೇ 16 ರಿಂದ ಜೂನ್ 13ರ ವರೆಗೆ ವಿಶೇಷ ಶಿಬಿರ ಆಯೋಜನೆ ಮಾಡಲಾಗಿತ್ತು, ಈ ವೇಳೆ ಸಮಾಜ ಶಾಸ್ತ್ರ ಮತ್ತು ಮೋಟಿವೇಷನ್ ತರಗತಿಗಳನ್ನು ಲೋಕಾಯುಕ್ತ ಡಿವೈಎಸ್ಪಿ ರಾಜೇಶ್ ಅವರು ನಡೆಸಿದ್ದರು.
ಇದನ್ನೂ ಓದಿ: ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ!
ಈ ಶಿಬಿರದಲ್ಲಿ ಮಂಗಮ್ಮನಪಾಳ್ಯ, ಆನೇಕಲ್, ಚಂದಾಪುರ ಭಾಗದ 178 ಮಂದಿ SSLC ಅನುತ್ತೀರ್ಣರಾದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಡಿವೈಎಸ್ಪಿ ರಾಜೇಶ್ ಅವರ ಸ್ಪೆಷಲ್ ಕ್ಲಾಸ್ಗಳಿಗೆ ಶಾಸಗಿ ಶಾಲೆಗಳ 18 ಶಿಕ್ಷಕರು ಸಾಥ್ ನೀಡಿದ್ದರು.
ವಿಶೇಷ ಶಿಬಿರ ತರಗತಿಗಳ ಬಳಿಕ ಶಿಬಿರದಲ್ಲಿ ಭಾಗವಹಿಸಿದ್ದ 178 ವಿದ್ಯಾರ್ಥಿಗಳ ಪೈಕಿ 103 ಮಂದಿ ಪಾಸಾಗಿದ್ದಾರೆ. ಇದರಲ್ಲಿ ಈ ಹಿಂದೆ 6 ಕ್ಕೆ 6 ವಿಷಯಗಳಲ್ಲೂ ಫೇಲ್ ಆಗಿದ್ದ ವಿದ್ಯಾರ್ಥಿಗಳು ಶಿಬಿರದ ವಿಶೇಷ ತರಗತಿಗಳ ಬಳಿಕ 6ಕ್ಕೆ6ರಲ್ಲೂ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗು ಪೋಷಕರು DYSP ರಾಜೇಶ್ ಅವರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೂ ಡಿವೈಎಸ್ಪಿ ರಾಜೇಶ್ ಚಾಕ್ಲೇಟ್ ನೀಡಿ ಶುಭಕೋರಿದ್ದಾರೆ.