ಹಾಸನ: ಜಮೀನಿಗೆ ನುಗ್ಗಿ ಬೆಳೆ ಹಾಳುಮಾಡಿವೆ ಎಂದು ಜಾನುವಾರುಗಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆಮಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಡೆಕೆರೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಪವರ್ ಟಿವಿಗೆ ‘ಸುಪ್ರೀಂ’ ಪವರ್!
ಗ್ರಾಮದ ಹರೀಶ್ ಎಂಬುವವರಿಗೆ ಸೇರಿದ ಎರಡು ಹಸುಗಳು ಇದೇ ಗ್ರಾಮದ ಈರಯ್ಯ ಎಂಬುವವರ ಹೊಲಕ್ಕೆ ತೆರಳಿ ಫಸಲು ನಾಶ ಮಾಡಿದ್ದವು. ಇದಕ್ಕೆ ಸಿಟ್ಟಿಗೆದ್ದ ಈರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಹರೀಶ್ ಆರೋಪಿಸಿದ್ದಾರೆ. ಹಸುಗಳ ಕಾಲು, ಹೊಟ್ಟೆ, ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿದೆ. ಮೂಕ ಪ್ರಾಣಿಗಳು ತೀವ್ರ ನೋವಿನಿಂದ ನರಳುತ್ತಿವೆ. ಜಾನುವಾರುಗಳಿಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಲಾಗಿದೆ.
ಘಟನೆ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.