ಕನ್ನಡ ಸಿನಿಮಾ ರಂಗ ಕಂಡ ಅದ್ಭುತ ಪ್ರತಿಭೆ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸ್ರ್ನಿಂದ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಸಾವಿನ ಸುದ್ದಿ ತಿಳಿದು ಗಣ್ಯಾತಿ ಗಣ್ಯರು, ಚಿತ್ರರಂಗದ ನಟ ನಟಿಯರೂ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಪುಟ್ಟಣ್ಣ ಪರಿಚಯಿಸಿದ ತಾರೆ ಅಪರ್ಣಾ..‘ಮಸಣ’ ಸೇರಿದ ‘ಹೂವು’
ಅಪರ್ಣ ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲೂ ಕೂಡ ಮಿಂಚಿದ್ದರು ಈ ನಟಿ. ಅಪರ್ಣಾ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಅವರು ಪಾರ್ಥಿವ ಶರೀರ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಚಿತ್ರರಂಗದ ಗಣ್ಯರು ಕೂಡ ಬಂದಿದ್ದಾರೆ.
ಮಜಾ ಟಾಕೀಸ್ ಕಾಮಿಡಿ ಮೂಲಕವೇ ಹೆಸರು ಮಾಡಿದ್ದ ವರಲಕ್ಷ್ಮೀ (ಅಪರ್ಣಾ) ಇನ್ನು ಮುಂದೆ ಇಲ್ಲ ಎಂಬ ಸುದ್ದಿ ಕೇಳಿ ಮಜಾ ಟಾಕೀಸ್ ತಂಡ ಓಡೋಡಿ ಬಂದಿದೆ. ಅವರು ಜತೆಗೆ ಈ ಶೋನಲ್ಲಿ ನಡೆಸಿದ್ದ ನಟರು ಹಾಗೂ ಸಿಬ್ಬಂದಿಗಳು ಅವರು ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ಸೇರಿದಂತೆ ತಮ್ಮ ಗೆಳತಿಯನ್ನು ಕೊನೆಯ ಬಾರಿ ನೋಡಲು ತಂಡ ಬಂದಿದ್ದಾರೆ.