ಬೆಂಗಳೂರು: ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಕರಣದ ಎ2 ಆರೋಪಿ ದರ್ಶನ್ ಅವರನ್ನು ಭೇಟಿ ಮಾಡಲು ಇಂದು ದರ್ಶನ್ ಸಹೋದರಿ ಮತ್ತು ಕುಟುಂಬದವರು ಆಗಮಿಸಿದ್ದರು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮದ ಸುಳಿಯಲ್ಲಿ ಶಾಸಕರ ಪಿಎ! ದದ್ದಲ್ಗೂ ಸಂಕಷ್ಟನಾ?
ಈಗಾಗಲೇ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಜೈಲು ಊಟ ಸೇವನೆ ಮಾಡಿ ವಾಂತಿ, ಬೇದಿ ಶುರುವಾಗಿದೆ, ಆರೋಗ್ಯ ಸಮಸ್ಯೆ ಉಂಟಾಗಿದ್ದು ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಸಹೋದರನ ಆರೋಗ್ಯ ವಿಚಾರಸಲು ದರ್ಶನ್ ರ ಅಕ್ಕ, ಭಾವ ಹಾಗು ಅಳಿಯ ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು.
ದರ್ಶನ್ಗಾಗಿ ಮನೆಯಿಂದಲೇ ಎರಡು ಬ್ಯಾಗ್ಗಳನ್ನು ತರಲಾಗಿತ್ತು, ಒಂದು ಬ್ಯಾಗ್ನಲ್ಲಿ ಬೆಡ್ಶೀಟ್ ಇನ್ನೊಂದು ಬ್ಯಾಗ್ನಲ್ಲಿ ಬಟ್ಟೆಗಳನ್ನು ಹೊತ್ತು ಅಳಿಯ ಚಂದನ್ ಜೈಲಿನಲ್ಲಿರುವ ದರ್ಶನ್ರನ್ನು ಭೇಟಿಯಾಗಿದ್ದಾರೆ.