ಬೆಂಗಳೂರು: ಮೊಬೈಲ್ ಫೋನ್ಗೆ ಚಾರ್ಜ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿ ಸಾವಿಗೀಡಾಗಿರುವ ಘಟನೆ ಶುಕ್ರವಾರ ರಾತ್ರಿ ನಗರದ ಪಿಜಿಯೊಂದರಲ್ಲಿ ನಡೆದಿದೆ.
ಬೀದರ್ ಮೂಲದ ಶ್ರೀನಿವಾಸ್ (24) ಮೃತ ವಿದ್ಯಾರ್ಥಿ. ಬೆಂಗಳೂರಿನ ಮಂಜುನಾಥ ನಗರದ ಪಿಜಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಬಾವಿಗೆ ಎಸೆದು 2 ತಿಂಗಳ ಹಸುಗೂಸು ಕೊಲೆ
ಸಾಫ್ಟ್ವೇರ್ ಕೋರ್ಸ್ ಮಾಡಲು ಬೀದರ್ನಿಂದ ಬೆಂಗಳೂರಿಗೆ ಬಂದಿದ್ದ ಶ್ರೀನಿವಾಸ್, ಮಂಜುನಾಥ ನಗರದ ಪಿಜಿಯೊಂದರಲ್ಲಿ ನೆಲೆಸಿದ್ದ, ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮೊಬೈಲ್ಗೆ ಚಾರ್ಜ್ ಮಾಡಲು ಮುಂದಾಗಿದ್ದ. ಈ ವೇಳೆ ಸ್ವಿಚ್ ಬೋರ್ಡ್ ಹಾಗು ಚಾರ್ಜಿಂಗ್ ವೈಯರ್ ನಿಂದ ವಿದ್ಯುತ್ ಶಾಕ್ ತಗುಲಿದೆ. ಈ ಚಾರ್ಜರ್ ಅದಾಗಲೇ ಡ್ಯಾಮೇಜ್ ಆಗಿತ್ತು ಎಂದು ತಿಳಿದು ಬಂದಿದೆ. ವಿದ್ಯತ್ ಶಾಕ್ನಿಂದ ವಿದ್ಯಾರ್ಥಿ ಸ್ಥಳದಲ್ಲೇ ಅಂಗಾತ ಬಿದ್ದಾನೆ. ಈ ವೇಳೆ ಪಕ್ಕದ ಬೆಡ್ ಯುವಕ ಊಟಕ್ಕೆ ಕರೆಯಲು ಶ್ರೀನಿವಾಸ್ನನ್ನು ಮುಟ್ಟಿದಾಗ ಆತನಿಗೂ ವಿದ್ಯುತ್ ಶಾಕ್ ತಗುಲಿದೆ, ಅದೃಷ್ಟ ವಶಾತ್ ಯುವಕ ಪಾರಾಗಿದ್ದಾನೆ.
ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಪಿಜಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗು ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.