ಬೆಂಗಳೂರು: ದರ್ಶನ್ ಅವರು ತಮ್ಮ ಮುಂದಿನ ಚಿತ್ರ ಡೆವಿಲ್ಗೆ ಈಗಾಗಲೇ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು ಸಂಭಾವನೆ 22 ಕೋಟಿ ಎಂದು ವರದಿಯಾಗಿದೆ. ಇದೀಗ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವುದುಕ್ಕೆ ನಿರ್ಮಾಪಕ ಮಿಲನಾ ಪ್ರಕಾಶ್ ಇದೀಗ ಶಾಕ್ನಲ್ಲಿದ್ದಾರೆ.
ದರ್ಶನ್ ಎಡವಟ್ಟಿನಿಂದ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ. ಟೀಸರ್ ನಿಂದಲೇ ಕೌತುಕ ಹುಟ್ಟಿಸಿದ ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಆಗಿದೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಗೆ ಪೆಟ್ಟಾಗಿತ್ತು. ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಈ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನದ ಹಿಂದೆ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಿನ್ನೆ ದರ್ಶನ್ ಶೂಟಿಂಗ್ನಲ್ಲಿ ಭಾಗವಹಿಸಬೇಕಿತ್ತು ಅಷ್ಟರಲ್ಲಿ ದರ್ಶನ್ ಪೊಲೀಸರ ಅತಿಥಿಯಾದರು.
ಇದನ್ನೂ ಓದಿ: ದರ್ಶನ್ ಇದ್ದ ಪೊಲೀಸ್ ಠಾಣೆಗೆ ಶಾಮಿಯಾನ: ರಹಸ್ಯ ಬಯಲು
ಡೆವಿಲ್ ಚಿತ್ರದ ಬಳಿಕ ದರ್ಶನ್ ನಟಿಸಲು ಒಪ್ಪಿಕೊಂಡ ಚಿತ್ರ ಸಿಂಧೂರ ಲಕ್ಷ್ಮಣ. ನಿರ್ಮಾಪಕ ಬಿ.ಸುರೇಶ್ ನಿರ್ಮಾಣದ ಹಾಗು ತರುಣ್ ಸುಧೀರ್ ನಿರ್ದೇಶನದ ಸಿಂಧೂರು ಲಕ್ಷ್ನಣ ಸಿನಿಮಾ ಶುರುವಾಗಬೇಕಿತ್ತು. ದರ್ಶನ್ ಯಡವಟ್ಟಿನಿಂದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಈ ಸಿನಿಮಾ ದರ್ಶನ್ ಪಡೆದಿರೋ ಅಡ್ವಾನ್ಸ್ ಹಣ 3 ಕೋಟಿಯಂತೆ. ಜೋಗಿ ಪ್ರೇಮ್ ನಿರ್ದೇಶನದ ಕೆವಿಎನ್ ಪ್ರೋಡಕ್ಷನ್ ನಲ್ಲಿ ಚಿತ್ರ ಕಮಿಟ್ ಆಗಿದ್ದರು ಎನ್ನಲಾಗಿದೆ. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಅಂತಾ ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆಂತೆ ಎಂದು ತಿಳಿದು ಬಂದಿದೆ.