ದೊಡ್ಮನೆಯಲ್ಲಿ ಡಿವೋರ್ಸ್ ಬಿರುಗಾಳಿ ಎದ್ದಿದ್ದು, ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ನಟ ಗುರು@ ಯುವರಾಜ್ ಕುಮಾರ್ ರಾಘವೇಂದ್ರ ಅವರು ತಮ್ಮ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ನಟ ಯುವರಾಜ್ ಕುಮಾರ್ ಅವರು ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಚೇದನ ಕೋರಿ ಜೂನ್.6 ರಂದು ಫ್ಯಾಮಿಲಿ ಕೋರ್ಟ್ ಗೆ ಅರ್ಜಿಸಲ್ಲಿಸಿದ್ದಾರೆ. ಎಂಸಿ ಆ್ಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ದೂರು ದಾಖಲಾಗಿದೆ. ಅರ್ಜಿಗೆ ಸಂಬಂಧಿಸಿ ಫ್ಯಾಮಿಲಿ ಕೋರ್ಟ್ ಈಗಾಗಲೇ ಯುವರಾಜ್ ಪತ್ನಿ ಶ್ರೀದೇವಿಗೆ ನೋಟೀಸ್ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲವು ಜುಲೈ 4 ರಂದು ನಿಗಧಿಪಡಿಸಿದೆ.
ನಟ ಯುವರಾಜ್ ಸಲ್ಲಿಸಿರುವ ವಿಚ್ಚೇದನ ಅರ್ಜಿಯಲ್ಲಿ ತಮ್ಮ ಪತ್ನಿ ವಿರುದ್ದ ಹಲವು ಕಾರಣಗಳನ್ನು ನೀಡಿದ್ದಾರೆ. ಈ ಪೈಕಿ ಕ್ರೌರ್ಯ, ಅಗೌರವದಿಂದ ನಡೆದುಕೊಂಡ ಆರೋಪ, ಮಾನಸಿಕವಾಗಿ ಟಾರ್ಚರ್ ಸೇರಿದಂತೆ ಹಲವು ಕಾರಣಗಳ ಯವ ನೀಡಿದ್ದಾರೆ.
ಯುವರಾಜ್ ಪತ್ನಿ ಶ್ರೀದೇವಿ ಭೈರಪ್ಪ ಈಗಾಗಲೇ ಪತಿಯಿಂದ ದೂರವಾಗಿ ಹಲವು ತಿಂಗಲುಗಳಿಂದ ಅಂತರ ಕಾಯ್ದುಕೊಂಡು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ಇತ್ತಿಚೆಗೆ ‘ಯುವ’ ಸಿನಿಮಾ ಶೂಟಿಂಗ್, ಸಕ್ಸಸ್ ಮೀಟ್ನಿಂದಲೂ ದೂರ ಉಳಿದಿದ್ದಾರೆ.
ಮೈಸೂರು ಮೂಲದ ಶ್ರೀದೇವಿ ಜೊತೆ 4 ವರ್ಷಗಳ ಹಿಂದೆ ಯುವರಾಜ್ ಜೊತೆ ಲವ್ ಕಂ ಅರೇಂಜ್ ಮ್ಯಾರೇಜ್ ಆಗಿದ್ದರು. ಬಳಿಕ ಡಾ.ರಾಜ್ಕುಮಾರ್ ಹೆಸರಿನಲ್ಲಿರುವ IAS ಅಕಾಡೆಮಿ ಕೋಚಿಂಗ್ ಸೆಂಟರ್ ನಡೆಸಿಕೊಂಡು ಹೋಗುತ್ತಿದ್ದರು.
ಡೈವೋರ್ಸ್ ಕುರಿತು ಯುವ ಪತ್ನಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ:
ನಟ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಮದುವೆ ವಿಚ್ಚೇದನಕ್ಕೆ ಸಂಬಂಧಿಸಿ ಯುವ ಪತ್ನಿ ಶ್ರೀದೇವಿ ಅಮೇರಿಕಾದಲ್ಲಿದ್ದು ಪವರ್ ಟಿವಿ ಜೊತೆಗೆ ಮಾತನಾಡಿದ್ದಾರೆ. ನೀಡಿರುವ ಅವರು, ಸದ್ಯಕ್ಕೆ ಈ ಕುರಿತು ಏನನ್ನೂ ಮಾತನಾಡೋದಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.