ಚಿತ್ರದುರ್ಗ: ಕುರಾನ್ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮೌಲ್ವಿಯೇ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿರುವ ಘಟನೆ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಚಿತ್ರದುರ್ಗದ ಮಸೀದಿಯಲ್ಲಿ ಕುರಾನ್ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಳಿ ಸೋಕಿದೆ ಪೂಜೆ ಮಾಡಬೇಕು ಎಂದು ಹೇಳಿದ ಹಜರತ್ ಮೌಲ್ವಿ ಪೂಜೆಯನ್ನು ಮಸೀದಿಯಲ್ಲಿ ಬೇಡ ಎಂದು ಬಾಲಕಿಯ ಮನೆಯಲ್ಲಿಯೇ ಪೂಜೆಗೆ ಏರ್ಪಾಡು ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಗೃಹಪ್ರವೇಶದ ಊಟ ಸೇವಿಸಿ ಓರ್ವ ವೃದ್ದೆ ಸಾವು, ಹಲವರು ಅಸ್ವಸ್ಥ
ಈ ವೇಳೆ ಬಾಲಕಿಗೆ ದೆವ್ವ ಮೆಟ್ಟಿದೆ, ದೈಹಿಕ ಸುಖ ಕೊಟ್ರೆ ದೂರವಾಗುತ್ತೆ ಎಂದು ಹೇಳಿ ವಂಚಿಸಿದ್ದಾನೆ. ಬಳಿಕ ಬಾಲಕಿಯ ಸಹೋದರನಿಗೂ ಅತ್ಯಾಚಾರ ಮಾಡುವಂತೆ ಪ್ರೇರೇಪಿಸಿದ್ದಾನೆ. ಈ ಘಟನೆ ಸಂಬಂಧ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.