ನವದೆಹಲಿ: ಲೋಕಸಬಾ ಚುನಾವಣೆ ಪ್ರಚಾರದ ಬಳಿಕ ಪ್ರಧಾನಿ ಮೋದಿ ಮತ್ತೆ ಆ್ಯಕ್ಟೀವ್ ಆಗಿದ್ದು ಸಾಲು ಸಾಲು ಸರಣಿ ಸಭೆ ನಡೆಸಲು ಮುಂದಾಗಿದ್ದಾರೆ.
ಇಂದು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಏಳು ಸಭೆಗಳನ್ನು ನಡೆಸಲು ಸಿದ್ದತೆ ನಡೆಸಿದ್ದಾರೆ. ಇದರಲ್ಲಿ ರೆಮೆಲ್ ಚಂಡಮಾರುತ ಪರಿಶೀಲನೆ ಸಭೆ, ಈಶಾನ್ಯ ರಾಜ್ಯಗಳು & ಉತ್ತರ ರಾಜ್ಯಗಳ ಬಿಸಿಗಾಳಿ ವಿಚಾರ, ಸರ್ಕಾರದ ಮುಂದಿನ 100 ದಿನಗಳ ಅಜೆಂಡಾ ಕುರಿತು ಚರ್ಚೆ, ವಿಶ್ವ ಪರಿಸರ ಆಚರಣೆ ಸಿದ್ದತೆ ಕುರಿತು ಸಭೆ, ರೆಮಲ್ ಚಂಡಮಾರುತದದಿಂದ ಆದ ಹಾನಿ ಬಗ್ಗೆ ಚರ್ಚೆ, ಚಂಡಮಾರುತದಿಂದ ಉಂಟಾದ ಹಾನಿಗೆ ಪರಿಹಾರದ ಬಗ್ಗೆ ಮಾಹಿತಿ, ಜೂನ್ 5 ರಂದು ಆಚರಿಸಲಾಗುವ ವಿಶ್ವ ಪರಿಸರ ದಿನದ ಸಿದ್ಧತೆಗಳ ಬಗ್ಗೆ ಸಿದ್ದಾತ ಸಭೆಗಳನ್ನು ನಡೆಸಲಾಗುತ್ತದೆ ಇದರ ಉದ್ದೇಶ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಉತ್ತೇಜಿಸುವುದು, ಈ ವರ್ಷದ ಥೀಮ್ ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ ಆಗಿದೆ. ಇವು ಇಂದಿನ ಸಭೆಯಗಳಲ್ಲಿ ಪ್ರಮುಖವಾದವುಗಳಾಗಿದೆ.
ಇದನ್ನು ಓದಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಭವಿಷ್ಯ- ಮೋದಿ ಪ್ರತಿಕ್ರಿಯೆ
ಎಕ್ಸಿಟ್ ಪೋಲ್ ಸಮೀಕ್ಷೆ; ಎನ್ಡಿಎಗೆ ಮುನ್ನಡೆ
ದೇಶಾದ್ಯಂತ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯೂ, ಮೇ 01 ರಂದು ನಡೆದ ಮತದಾನ ಪ್ರಕ್ರಿಯೊಂದಿಗೆ ಎಲ್ಲಾ ಹಂತಗಳು ಮುಕ್ತಾಯವಾಗಿದೆ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಅದೇ ದಿನ ಸಂಜೆ ಕೆಲವು ಮಾದ್ಯಮ ಸಂಸ್ಥೆಗಳು ಎಕ್ಸಿಟ್ ಪೋಲ್ ನಡೆಸಿ ಬಿಜೆಪಿಗೆ ಮುನ್ನಡೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಇದರೊಂದಿಗೆ ಮತ್ತೆ ಮೋದಿ ಸರಣಿ ಸಭೆಗಳನ್ನು ನಡೆಸಲು ಉತ್ಸುಕರಾಗಿದ್ದಾರೆ.