ದೇವನಹಳ್ಳಿ: ಅನಾಮಿಕ ವ್ಯಕ್ತಿಯೋರ್ವ ಬೆತ್ತಲಾಗಿ ಮನೆಗಳ ಕಾಂಪೌಂಡ್ಗಳನ್ನು ಹಾರಿಕೊಂಡು ಸುತ್ತಾಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಶೋಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಅನಾಮಿಕನ ಬೆತ್ತಲೆ ಓಡಾಟದಿಂದ ಇಲ್ಲಿನ ಜನರಿಗೆ ಬಾರಿ ಕಿರಿಕಿರಿಯಾಗುತ್ತಿದ್ದು, ಇಲ್ಲಿನ ಮಹಿಳೆಯರು ಭಯಭೀತರಾಗಿದ್ದಾರೆ. ಸ್ಥಳೀಯರು ಈ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಮಾನಸಿಕ ಅಸ್ವಸ್ತತೆಯಿಂದ ಈ ರೀತಿ ಬೆತ್ತಲೆಯಾಗಿ ಓಡಾಟ ನಡೆಸಿರುವ ಶಂಕೆಯನ್ನು ಜನರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಖಾತೆಗೆ ಒಂದು ಲಕ್ಷ: ಪೋಸ್ಟ್ ಆಫೀಸ್ ಅಕೌಂಟ್ ತೆರೆಯಲು ಮುಗಿಬಿದ್ದ ಜನ
ಈ ಘಟನೆಯ ಕುರಿತು ಅಶೋಕ ನಗರದ ಜನರು ವಿಜಯಪುರ ಪೊಲೀಸರಿಗೆ ದೂರ ನೀಡಿದ್ದು ಅನಾಮಿಕ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.