ಆನೇಕಲ್: ಕಂಠಪೂರ್ತಿ ಕುಡಿದ ಕುಡುಕನೋರ್ವ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಗೋಪುರದ ರಾಷ್ಟ್ರೀಯ ಹೆದ್ದಾರಿಯ ಬಳಿ ಲಾರಿಗಳನ್ನು ಅಡ್ಡಗಟ್ಟಿದ ಆಸಾಮಿ, ಲಾರಿಗಳನ್ನು ಮುಂದಕ್ಕೆ ಹೋಗಲು ಬಿಡದೇ ಲಾರಿ ತಡೆದು ರಸ್ತೆ ಮಧ್ಯೆ ಮಲಗಿ ಕಿರಿಕಿರಿ ಉಂಟುಮಾಡಿದ್ದಾನೆ. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಹೆದ್ದಾರಿಯಲ್ಲಿ ವಾಹನಗಳು ಅತಿವೇಗವಾಗಿ ಬರುತ್ತಿದ್ದರು ವಾಹನಗಳ ಮಧ್ಯೆ ನುಗ್ಗುತ್ತಿದ್ದ ಕುಡುಕನಿಂದ ಹೆದ್ದಾರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಕೇಸ್: ಕೊನೆಗೂ ಸ್ಫೋಟಕ ಅಂಶ ಬಯಲು
ಅತ್ತಿಬೆಲೆ ಗಡಿಭಾಗದಲ್ಲಿ ಇತ್ತೀಚೆಗೆ ಮದ್ಯದಂಗಡಿಗಳು ಸಂಖ್ಯೆ ಹೆಚ್ಚಾಗಿದ್ದು ಹೆದ್ದಾರಿಯ ಅಕ್ಕಪಕ್ಕದಲ್ಲಿಯೇ ಸಾಲು ಸಾಲು ಮದ್ಯದಂಗಡಿಗಳು ತಲೆ ಎತ್ತಿರುವುದರಿಂದ ಹಗಲಿನಲ್ಲೇ ಕುಡುಕರ ಸಂಖ್ಯೆ ಮಿತಿಮೀರುತ್ತಿದೆ ಇದರಿಂದ ರಾಜ್ಯ ಗಡಿ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆಯಲ್ಲು ಏರಿಕೆಯಾಗುತ್ತಿದೆ.