ಬೆಂಗಳೂರು ಗ್ರಾಮಾಂತರ: ಫೋನ್ ಪೇ ಮೂಲಕ ಖಾತೆಗೆ ಹಣ ಕಳಿಸುವಂತೆ ದೇವನಹಳ್ಳಿ ತಾಲೂಕಿನ ವಿವಿಧ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮತ್ತು PSIಗಳಿಗೆ ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಅವರ ಹೆಸರಿನಲ್ಲಿ ಅನಾಮಿಕ ವ್ಯಕ್ತಿ ಮೆಸೆಜ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಇನ್ಸ್ಪೆಕ್ಟರ್ ಪ್ರಶಾಂತ್, ಚನ್ನರಾಯಪಟ್ಟಣ ಪಿಎಸ್ಐ ಅಣ್ಣಯ್ಯ, ಪಿಎಸ್ಐ ನಂದೀಶ್ ರಿಗೆ ಹಣಕ್ಕೆ ಬೇಡಿಕೆ ಇಡಲಾಗಿದೆ. ವಾಟ್ಸಾಪ್ ಡಿಪಿಯಲ್ಲಿ ಜಿಲ್ಲಾಧಿಕಾರಿಗಳ ಫೋಟೋ ಬಳಸಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಮೆಸೇಜ್ ಮಾಡಲಾಗಿದ್ದು ಪ್ರತಿಯೊಬ್ಬರು 50 ಸಾವಿರ ನೀಡುವಂತೆ ಸಂದೇಶದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಪತ್ನಿಯನ್ನು ಹೆದರಿಸಲು ಹೋದ ಜಿಮ್ ಟ್ರೈನರ್ ನೇಣು ಕುಣಿಕೆಗೆ ಬಲಿ
94768217403 ಮೊಬೈಲ್ ಸಂಖ್ಯೆಯಿಂದ ಪೋಲಿಸ್ ಅಧಿಕಾರಿಗಳಿಗೆ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟ ಅನಾಮಿಕ ಹಣವನ್ನು 8884470191 ಸಂಖ್ಯೆಗೆ ತುರ್ತಾಗಿ 50 ಸಾವಿರ ಕಳಿಸುವಂತೆ ತಿಳಿಸಿದ್ದಾರೆ.
ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಅವರ ಆಪ್ತ ಸಹಾಯಕ ಅಭಿಶೇಕ್ ರಿಂದ ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ PSI ಅಣ್ಣಯ್ಯ ಗೆ ಹಣಕ್ಕೆ ಡಿಮ್ಯಾಂಡ್ ಇಟ್ಟು ಮೆಸೇಜ್ ಮಾಡಿದ್ದ ಸಂದೇಶದ ಮೊಬೈಲ್ ಸ್ಕ್ರೀನ್ ಶಾಟ್ ಉಲ್ಲೇಖಿಸಿ ದೂರು ದಾಖಲಿಸಲಿಸಿದ್ದಾರೆ.