ಬಾಗಲಕೋಟೆ : ರಾಜ್ಯದಲ್ಲಿ ಎರಡನೇ ಹಂತದ ಲೊಕಸಭಾ ಚುನಾವಣಾ ಪ್ರಚಾರದ ಕಾವು ಜೊರಾಗಿದೆ. ಇಂದು ಬಾಗಲಕೋಟೆ ಲೊಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಚಿತ್ರನಟ, ನಿರ್ದೆಶಕ ಎಸ್. ನಾರಾಯಣ್ ಭರ್ಜರಿ ಪ್ರಚಾರ ನಡೆಸಿದರು.
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬೇವೂರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹಾಗೂ ಎಸ್. ನಾರಾಯಣ್ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು.
ಬೇವೂರು ಗ್ರಾಮದ ಕಾಳಿಕಾಂಬಾ ದೇವಿಯ ದರ್ಶನ ಪಡೆದ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್, ಬಳಿಕ ಪ್ರಚಾರ ಆರಂಭಿಸಿದರು. ಬೇವೂರು ಗ್ರಾಮದಲ್ಲಿ ಸಂಯುಕ್ತಾ ಪಾಟೀಲ್ ಪರ ಎಸ್. ನಾರಾಯಣ್ ಭರ್ಜರಿ ಪ್ರಚಾರ ನಡೆಸಿದರು.
ತೆರದ ವಾಹನದಲ್ಲಿ ರೊಡ್ ಶೋ ನಡೆಸಿ, ಸಂಯುಕ್ತ ಪರ ಮತ ಯಾಚನೆ ಮಾಡಿದರು. ಜೆಸಿಬಿ ಮೂಲಕ ಸಂಯುಕ್ತ ಪಾಟೀಲ್, ಎಸ್. ನಾರಾಯಣ್ ಮೇಲೆ ಅಭಿಮಾನಿಗಳು ಹೂಮಳೆಗರೆದರು. ನಂತರ ಪ್ರಚಾರ ಸಭೆಯಲ್ಲಿ ಎಸ್. ನಾರಾಯಣ್ ಭಾಗಿಯಾದರು.
ಈ ವೇಳೆ ಮಾತನಾಡಿ, ನೀವು ಅವರನ್ನು ಆಯ್ಕೆ ಮಾಡ್ತಿರಿ, ಅವರು ಆಯ್ಕೆ ಆಗ್ತಾರೆ. ಗೆಲ್ತಾರೆ ಅಂತ ನನಗೆ ಗೊತ್ತು. ಒಂದು ಮನೆಗೆ ಒಬ್ಬ ಒಳ್ಳೆಯ ತಂದೆ ಇರಬೇಕು. ಒಂದು ಕ್ಷೇತ್ರಕ್ಕೆ ಒಳ್ಳೆಯ ನಾಯಕ ಇರಬೇಕು. ಹಾಗಾಗಿ, ಸಂಯುಕ್ತ ಪಾಟೀಲ್ರನ್ನ ಆಯ್ಕೆ ಮಾಡಿ ಎಂದು ಎಸ್.ನಾರಾಯಣ್ ಮತಯಾಚನೆ ಮಾಡಿದರು.