ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಬೇರೆ ಬೇರೆ ರಾಜ್ಯಗಳಲ್ಲಿಯೂ ಆರೋಪಿ ಪತ್ತೆಗೆ ತನಿಖಾ ತಂಡ ಮುಂದಾಗಿದೆ. ಕೇರಳ, ತಮಿಳುನಾಡಿಗೆ ತನಿಖಾ ತಂಡಗಳು ತೆರಳಿವೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಪೋಟ ಸಂಬಂಧ ಇಂದು ಸಿಎಂ ಸಭೆ
ಸ್ಟೋಟ ನಡೆದ ಹಿನ್ನೆಲೆ ಶುಕ್ರವಾರವೇ ಬೆಂಗಳೂರಿಗೆ ತಮಿಳುನಾಡಿನ ಪೊಲೀಸ್ ಟೀಂ ಬಂದಿದೆ, ರಾಮೇಶ್ವರಂ ಕೆಫೆ ಪ್ರಧಾನ ಶಾಖೆ ತಮಿಳುನಾಡಿನಲ್ಲಿರುವ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಬೆಂಗಳೂರಿಗೆ ತಮಿಳುನಾಡು ಪೊಲೀಸರು ಬಂದಿದ್ದರು.
ಓರ್ವ DYSP ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಆರೋಪಿ ಪತ್ತೆಗೆ ತನಿಖಾ ಟೀಂ ಮುಂದಾಗಿದೆ. ಸಿಸಿಬಿ ವಿಶೇಷ ತಂಡಗಳಿಂದ ತನಿಖೆ ನಡೆಸುತ್ತಿದೆ. ಹತ್ತು ತಂಡಗಳು ಆರೋಪಿ ಪತ್ತೆಗೆ ಬಲೆ ಬೀಸಿವೆ.