Thursday, September 19, 2024

ಕೇಸರಿ ಶಾಲು, ತಿಲಕ ಕಂಡರೆ ಕಾಂಗ್ರೆಸ್ಸಿಗರ ಲುಂಗಿ ಒದ್ದೆಯಾಗುತ್ತೆ : ಬಿಜೆಪಿ

ಬೆಂಗಳೂರು : ವಿಧಾನಸೌಧದ ಒಳಗೆ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮೌಖಿಕ ಆದೇಶ ಹೊರಡಿಸಿದ್ದು, ಬಿಜೆಪಿ ಕಿಡಿಕಾರಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಜ್ಯ ಬಿಜೆಪಿ, ಮಜಾವಾದಿ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಸರಿ ಶಾಲು, ತಿಲಕ ಕಂಡರೆ ಲುಂಗಿ ಒದ್ದೆಯಾಗುತ್ತದೆ. ಇದಕ್ಕೆ ವಿಧಾನಸೌಧದ ಒಳಗೆ ಬಿಜೆಪಿಯ ಶಾಸಕರು ಕೇಸರಿ ಶಾಲು ಹಾಕಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಮೌಖಿಕ ಆದೇಶ ಹೊರಡಿಸಿದೆ ಎಂದು ಕುಟುಕಿದೆ.

ಹೇಡಿ ಕಾಂಗ್ರೆಸ್​ ಸರ್ಕಾರಕ್ಕೆ ಅಧಿಕೃತವಾಗಿ ಲಿಖಿತ ಆದೇಶ ಹೊರಡಿಸುವುದಕ್ಕೂ ಎದೆಗಾರಿಕೆ ಇಲ್ಲ. ಹೀಗಾಗಿ, ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಅವರ ಮೂಲಕ ಇಂತಹ ಕೃತ್ಯ ಮಾಡಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಜೈ ಶ್ರೀರಾಮ್‌ ಅಂದ್ರೆ ಮೈಮೇಲೆ ಸೈತಾನ್‌ ಬರುತ್ತೆ

ಜೈ ಶ್ರೀರಾಮ್‌ ಎಂದರೆ ಕಾಂಗ್ರೆಸ್​ ನಾಯಕರ ಮೈಮೇಲೆ ಸೈತಾನ್‌ ಬಂದು ಬಿಡುತ್ತದೆ. ಅದೇ ಪಾಕಿಸ್ತಾನ್‌ ಜಿಂದಾಬಾದ್‌ ಎಂದರೆ ಮೈ ರೋಮಾಂಚನವಾಗುತ್ತಿರುವುದು ಕನ್ನಡಿಗರ ದುರಂತ. ಹಲೋ ಕಾಂಗ್ರೆಸ್ಸಿಗರೇ, ನಿಮ್ಮ ತುಘಲಕ್‌ ಆಡಳಿತ ಕರ್ನಾಟಕದಲ್ಲಿ ನಡೆಯುವುದಿಲ್ಲ, ನಡೆಸಲು ಬಂದರೆ ನೋಡಿಕೊಂಡು ಸುಮ್ಮನೆ ಕೂರವಷ್ಟು ಹೇಡಿಗಳಲ್ಲ ಸ್ವಾಭಿಮಾನಿ ಕನ್ನಡಿಗರು. ಎಚ್ಚರಿಕೆಯಿಂದ ಇರಿ! ಎಂದು ಬಿಜೆಪಿ ಪೋಸ್ಟ್ ಮಾಡಿದೆ.

RELATED ARTICLES

Related Articles

TRENDING ARTICLES