ಬೆಂಗಳೂರು: ಮಂಗಳವಾರ ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಕೂಗು ಕೇಳಿಬಂದಿದೆ ಎನ್ನುವ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಪಾಕಿಸ್ತಾನ್ ಎಂಬ ಘೋಷಣೆಯನ್ನು ಯಾರೇ ಕೂಗಿದ್ದರು ಅದನ್ನ ಖಂಡಿಸುತ್ತೇವೆ, ಈಗಾಗಲೇ ಪಾಕಿಸ್ತಾನ ಜಿಂದಾಬಾದ್ ಎಂಬ ಕೂಗು ಕೇಳಿ ಯಾರು ಆಡಿದ್ದಾರೆ? ಏನೆಂದು ಕೂಗಿದ್ದಾರೆ ಎನ್ನುವ ಸ್ಷಷ್ಟ ಮಾಹಿತಿ ತಿಳಿಯಲು FSLಗೆ ಕಳಿಸಿದ್ದೇವೆ. ಅದರ ವರದಿ ಬರಬೇಕಿದೆ. ವರದಿಯಲ್ಲಿ ಕೂಗಿರುವುದು ಸಾಬೀತಾದರೇ ರಾಷ್ಟ್ರದ್ರೋಹದ ಕೆಲಸ ಯಾರೇ ಮಾಡಿದರು ಇದನ್ನು ಖಂಡಿಸುತ್ತೇವೆ ಮತ್ತು ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ.? : ಆರ್. ಅಶೋಕ್ ಕಿಡಿ
ಇನ್ನೂ ವಿಧಾನಸೌಧದಲ್ಲೆ ಇಂಥ ಕೂಗು ಕೇಳಿಬರುತ್ತಿರುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶ ದ್ರೋಹದ ಕೂಗು ಕೂಗುವವರು ಇಲ್ಲಾದರೇನು ಎಲ್ಲಾದರೇನು? ಯಾರೇ ಈ ಕೂಗು ಕೂಗಿದ್ದರು ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.