ಬೆಂಗಳೂರು : ಶಾಸಕ ರಾಜಾ ವೆಂಕಟಪ್ಪ ನಾಯಕರ ಅಗಲಿಕೆ ಕಾಂಗ್ರೆಸ್ ಮಾತ್ರ ಅಲ್ಲ, ವೈಯಕ್ತಿಕವಾಗಿ ಕೂಡ ನನಗೆ, ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಮ್ಮ ಕುಟುಂಬದ ಜೊತೆ 50 ವರ್ಷಗಳ ಓಡನಾಟ ಇತ್ತು. ನಮ್ಮ ಕುಟುಂಬದ ಹಿರಿಯರು ಅಗಲಿದ ನೋವಾಗಿದೆ ಎಂದು ಬೇಸರಿಸಿದರು.
ಹಿರಿಯರಾದರೂ ಕೂಡ ನನ್ನನ್ನು ಚಿಕ್ಕವನೆಂದು ಭಾವಿಸಿರಲಿಲ್ಲ. ನಾನು ರಾಜಕೀಯ ಪ್ರವೇಶ ಮಾಡಿದಾಗ ನಮ್ಮ ಕ್ಷೇತ್ರದಲ್ಲಿ ಮಾಡದ ಸಂಭ್ರಮ ಸುರಪುರದಲ್ಲಿ ಮಾಡಿದ್ರು. 25 ವರ್ಷದ ಹಿಂದೆಯೇ ದೊಡ್ಡ ಸಂಭ್ರಮ ಮಾಡಿದ್ರು. ನನ್ನ ರಾಜಕೀಯ ಬೆಳವಣಿಗೆಗೆ ದೊಡ್ಡ ಭಾಗವಾಗಿದ್ದಾರೆ. ಮಾತೇ ಬರ್ತಾ ಇಲ್ಲ, ಬಹಳ ಸಮೀಪ ಇದ್ದವರು ಎಂದು ತಿಳಿಸಿದರು.
ಶಾಸಕರ ಅಂತ್ಯಕ್ರಿಯೆ ಎಲ್ಲಿ? ಯಾವಾಗ?
ಪಕ್ಷಕ್ಕೆ ಮಾತ್ರ ಅಲ್ಲ, ನಮ್ಮ ಭಾಗದ ಜನಾಂಗ ಕ್ಷೇತ್ರಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ನಿಧನ ನೋವು ಭರಿಸುವ ಶಕ್ತಿ ನೀಡಲಿ. ಹೆಸರು ರಾಜಾ ವೆಂಕಪ್ಪ ನಾಯಕರಾದರೂ ಸಾಮಾನ್ಯರ ಜೊತೆ ಬೆರೆತ ನಾಯಕರಾಗಿದ್ರು. ಸಾಮಾನ್ಯರಂತೆ ದುಡಿತ ಇದ್ದರು. ಇಂದು ರಾತ್ರಿ ಸುರಪುರಕ್ಕೆ ಮೃತದೇಹ ತಲುಪಲಿದೆ. ನಾಳೆ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಿದರು.