ಬೆಂಗಳೂರು : ಅವತ್ತು ನಾನು ಮತಗಟ್ಟೆಗೆ ಹೋದಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮತ ಹಾಕಲು ಕೈ ಬರಲಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ಬೇರೆ ಪಕ್ಷಕ್ಕೆ ಮತ ಹಾಕಿಲ್ಲ. ಆದರೆ, ಪಕ್ಷದ ತೀರ್ಮಾನ ಅಂತ ಜೆಡಿಎಸ್ಗೆ ಮತ ಹಾಕಿದ್ದೆ ಎಂದು ತಿಳಿಸಿದರು.
ತಪ್ಪಿನ ಅರಿವಾಗಿ ಎಸ್.ಪಿ. ಮುದ್ದಹನುಮೇಗೌಡ ಅವರು ಇವತ್ತು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅವರು ಪಕ್ಷಕ್ಕೆ ವಾಪಾಸ್ ಬರಲು ಸಚಿವ ಕೆ.ಎನ್. ರಾಜಣ್ಣ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಸಂಜೆ ತೀರ್ಮಾನ ಕಾರಣ. ಇಬ್ಬರೂ ಸಂಜೆ ಸೇರಿದಾಗ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದರು.
ಮುದ್ದಹನುಮೇಗೌಡ, ವಾಸುಗೆ ಪರಮೇಶ್ವರ್ ಸಲಹೆ
ಇದೇ ವೇಳೆ ನಗೆ ಚಟಾಕಿ ಹಾರಿಸಿದ ಡಾ.ಜಿ.ಪರಮೇಶ್ವರ್, ನಾನು ಸಂಜೆ ಅಂತ ಮಾತ್ರ ಹೇಳಿದ್ದೀನಿ. ಮುಂದಕ್ಕೆ ಹೇಳಿಲ್ಲ. ಅನ್ಯತಾ ಭಾವಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯರಿಗೆ ಹೇಳಿದರು. ಇದೇ ವೇಳೆ ಗಿಲ್ಟ್ ಆಗಬೇಡಿ ಅಂತ ಎಸ್.ಪಿ. ಮುದ್ದಹನುಮೇಗೌಡ, ವಾಸುಗೆ ಪರಮೇಶ್ವರ್ ಸಲಹೆ ನೀಡಿದರು.