Thursday, September 19, 2024

ಸಿಎಂಗೆ ಏನು ಆಗೋದಿಲ್ಲ ಎನ್ನುವ ಭರವಸೆ ಇದೆ: ಸಂಸದೆ ಪ್ರಭಾ ಮಲ್ಲಿಕಾರ್ಜುನ್​

ದಾವಣಗೆರೆ: ಮೂಡಾ ಹಗರಣದಲ್ಲಿ ಸಿಎಂ ಅವರ ಪಾತ್ರ ಏನು ಇಲ್ಲ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಇವತ್ತು ರಕ್ಷಾ ಬಂಧನ ಇದೆ. ಅಣ್ಣ ತಂಗಿಗೆ ಉಡುಗೊರೆ ಕೊಡೋದು ವಾಡಿಕೆ ಇದೆ. ಅದೇ ರೀತಿಯಲ್ಲಿ ಸಿಎಂ ಪತ್ನಿಯವರು ಉಡುಗೊರೆ ಪಡೆದಿದ್ದಾರೆ.‌ ಸೈಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರಲಿಲ್ಲ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲಿ ಕೇಂದ್ರ ಸರ್ಕಾರ ಇದೇ ರೀತಿ ಮಾಡ್ತಾ ಇದೆ, ನಾವು ಎಚ್ಚೆತ್ತುಕೊಳ್ಳಬೇಕಿದೆ. ಸಿದ್ದರಾಮಯ್ಯನವರ ಪರವಾಗಿ 136 ಶಾಸಕರ ಹಾಗೂ ಸಂಸದರ ಬೆಂಬಲ ಇದೆ. ಅವರಿಗೆ ಏನು ಆಗೋದಿಲ್ಲ ಎನ್ನುವ ಭರವಸೆ ಇದೆ.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾನೂನು ಹಾಗೂ ಸಂವಿಧಾನದ ಮೇಲೆ ಅಪಾರವಾದ ನಂಬಿಕೆ ಇದೆ. ಐಟಿ ಮತ್ತ ಇಡಿ ಸಂಸ್ಥೆ ಗಳನ್ನು ವೈಯಕ್ತಿಕ ಬಳಕೆಗೆ ಕೇಂದ್ರ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಕಾನೂನು ನಮಗೂ ಗೊತ್ತಿದೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರು.

RELATED ARTICLES

Related Articles

TRENDING ARTICLES