ಬೆಳಗಾವಿ: ಸಿದ್ದರಾಮಯ್ಯ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಸಿಡಿ ಶಿವು ಬಂದ್ರೇ ಎರಡು ದಿನದಲ್ಲಿ ಸರ್ಕಾರ ಬೀಳುತ್ತೆ ಎಂದು ಮಾಜಿ ಸಚಿವ ರಮೇಶ್ ಜಾರಕೀಹೋಳಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಇದಾರೆ. ಯಡಿಯೂರಪ್ಪ ಸಂದರ್ಭದಲ್ಲಿ ಸಿದ್ದರಾಮಯ್ಯ ಎನೂ ಮಾತಾಡಿದ್ರೂ. ಪ್ರತಿಯೊಂದು ಶಬ್ದವನ್ನ ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಬೇಕು ಅಂತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಲವೊಂದು ವಿಷಯಗಳನ್ನ ಮಾತಾಡಬಾರದು ಅಂತಾ ನಮ್ಮ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಅರವಿಂದ್ ಲಿಂಬಾವಳಿ ಒಬ್ಬರೇ ಮಾತನಾಡುತ್ತಾರೆ. ಯಡಿಯೂರಪ್ಪ ಟೈಮ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿ ಎನೂ ಮಾತಾಡಿದ್ರೂ. ಹೋರಾಟ ಮಾಡಿ ಮುಖ್ಯಮಂತ್ರಿ ಆದವರಿದ್ದಾರೆ. ಬೇರೆಯವರ ರೀತಿ ರಾಜಕೀಯ ದುರದ್ದೇಶ ಇಟ್ಟುಕೊಂಡು ನಾನು ಮಾತಾಡುವುದಿಲ್ಲ.
ಅವರ ಬಗ್ಗೆ ಗೌರವ ಇದೆ. ಯಡಿಯೂರಪ್ಪ ಅವರಿಗೆ ಮಾತಾಡಿದ್ದನ್ನ ನೆನಪಿಟ್ಟುಕೊಂಡು ಸಿದ್ದರಾಮಯ್ಯ ನಿರ್ಣಯ ತೆಗೆದುಕೊಳ್ಳಲಿ. ಸಿದ್ದರಾಮಯ್ಯ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಸಿಡಿ ಶಿವು ಬಂದ್ರೇ ಎರಡು ದಿನದಲ್ಲಿ ಸರ್ಕಾರ ಬೀಳುತ್ತೆ. ಅವರ ವ್ಯಕ್ತಿತ್ವ, ಅವರ ಭ್ರಷ್ಟಾಚಾರ, ಅವರು ಮುಖ್ಯಮಂತ್ರಿ ರೇಸ್ ನಲ್ಲಿದ್ರೇ ರಾಜ್ಯ ಅಧೋಗತಿಗೆ ಹೋಗುತ್ತೆ ಅಂತಾ ಕಿಡಿಕಾರಿದ್ದಾರೆ.