ಮೈಸೂರು: ಅವರ ಕುಟುಂಬದ ಅನುಕೂಲಕ್ಕಾಗಿ ಎಲ್ಲರನ್ನೂ ಓಡಿಸಿದರು. ದೇವೇಗೌಡ ಕುಟುಂಬ ಯಾರನ್ನು ಸಹಿಸೋದಿಲ್ಲ. 17 ಜನ ಗೆದ್ದಿದ್ರು ಯಾರನ್ನೂ ಸುಮ್ಮನೆ ಬಿಡಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.
ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ವಿರುದ್ದವಾಗಿ ಕಾಂಗ್ರೆಸ್ ನಡೆಸುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮದು ಧರ್ಮಯುದ್ಧ. ಅಸತ್ಯದ ವಿರುದ್ಧ ಸತ್ಯ ಯುದ್ಧ. ಕಾಂಗ್ರೆಸ್ ಪಕ್ಷಕ್ಕೆ ಅತಿದೊಡ್ಡ ಇತಿಹಾಸ ಇದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ 25 ಹಗರಣಗಳು ನಡೆದಿವೆ. ವಿಪಕ್ಷಗಳು ಮಾಡ್ತಿರೋದು ಪಾದಯಾತ್ರೆ ಅಲ್ಲ. ಅವ್ರ ಪಾಪ ವಿಮೋಚನಾ ಯಾತ್ರೆ ಮಾಡ್ತಿದ್ದಾರೆ.
ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಲ್ಲ.. ಸಿದ್ದರಾಮಯ್ಯರ ಜೊತೆ ಈ ಬಂಡೆ ಇರುತ್ತೆ : ಡಿಕೆ ಶಿವಕುಮಾರ್
ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ:
ಕೇಂದ್ರ ಸಚಿವ H.D.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲು ನನ್ನ ವಿರುದ್ಧ ಆರೋಪ ಮಾಡಿದ್ದರು. ಆಮೇಲೆ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಮೇಲೆ ಆರೋಪ ಮಾಡಿದ್ದರು. ಅವರ ಕುಟುಂಬದ ಅನುಕೂಲಕ್ಕಾಗಿ ಎಲ್ಲರನ್ನೂ ಓಡಿಸಿದರು. ದೇವೇಗೌಡ ಕುಟುಂಬ ಯಾರನ್ನು ಸಹಿಸೋದಿಲ್ಲ. 17 ಜನ ಗೆದ್ದಿದ್ರು ಯಾರನ್ನೂ ಸುಮ್ಮನೆ ಬಿಡಲಿಲ್ಲ ಎಂದು ಕಿಡಿಕಾರಿದರು.
ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಗರಣ ಪ್ರಸ್ತಾಪ:
ಬಿಜೆಪಿ ರಾಜ್ಯಾದ್ಯಕ್ಷ B.Y.ವಿಜಯೇಂದ್ರ ನಿಮ್ಮಪ್ಪ ಎರಡು ಬಾರಿ ರಾಜೀನಾಮೆ ಕೊಟ್ರಲ್ಲ ಯಾಕೆ. ಲಕ್ಷ್ಮಿ ವಿಲಾಸ್
ಬ್ಯಾಂಕ್ಗೆ ಹಣ ಟ್ರಾನ್ಸ್ಫರ್ ಮಾಡಿದೆಯಲ್ಲಾ ಮೊದಲು ಉತ್ತರ ಕೊಡು ವಿಜಯೇಂದ್ರ ಎಂದು ಪವರ್ ಟಿವಿ ವರದಿ ಉಲ್ಲೇಖಿಸಿ ಡಿಸಿಎಂ ಪ್ರಶ್ನಿಸಿದರು.