Friday, September 20, 2024

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಕೊಲೆ ಮಾಡಿರುವುದು ದೃಢ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚನಲ ಸೃಷ್ಠಿಸಿತ್ತು. ಕಾರಣ ಕೊಲೆ ಆರೋಪ ಸ್ಯಾಂಡಲ್​ವುಡ್​ನ ದೊಡ್ಡ ಸ್ಟಾರ್​ ನಟ ದರ್ಶನ್​ ಅವರ ಮೇಲಿತ್ತು ಹೀಗಾಗಿ ಈ ಕೇಸ್​​ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇದನ್ನೂ ಓದಿ: ಸೂರ್ಯ ಟೆಂಪಲ್​ನಲ್ಲಿ ಮಣ್ಣಿನ ಹರಕೆ ತೀರಿಸಿದ ನಟ ಯಶ್​ ದಂಪತಿ

ಸದ್ಯ ಈ ಪ್ರಕರಣ ಮತ್ತೊಂದು ದೊಡ್ಡ ಸಾಕ್ಷ್ಯ ಸಿಕ್ಕಿದ್ದು ದರ್ಶನ್​ಗೆ ದೊಡ್ಡ ಕಂಟಕ ಎದುರಾಗುವುದು ಪಕ್ಕಾ ಆಗಿದೆ. ಪೊಲೀಸರು ಕಳಿಸಿದ್ದ ಎಫ್​ಎಸ್​ಎಲ್​ ವರದಿ ಹೊರಬಿದ್ದಿದ್ದು. ದರ್ಶನ್​ ಬಟ್ಟೆ ಮೇಲೆ ಇದ್ದ ರಕ್ತದ ಕಲೆಯು ಕೊಲೆಯಾದ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳಾಗಿವೆ ಎಂದು FSL​ ವರದಿಯಿಂದ ದೃಢಪಟ್ಟಿದೆ.

ಪೊಲೀಸರು ದರ್ಶನ್​ ಮನೆಯಲ್ಲಿ ವಶಪಡಿಸಿಕೊಂಡಿದ್ದ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್​ ಟಿ-ಶರ್ಟ್​​ ಅನ್ನ FSLಗೆ ಕಳಿಸಿದ್ದರು. ತನಿಖೆಯಲ್ಲಿ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದರು ಎಂಬುದುಕ್ಕೆ ಅತ್ಯಂತ ಮಹತ್ವ ಪೂರ್ಣ ಸಾಕ್ಷ್ಯ ಸಿಕ್ಕಿದೆ ಎಂಬುದನ್ನ ಪೊಲೀಸ್​ ಇಲಾಖೆಯ ಉನ್ನತ ಮೂಲಗಳು ಪವರ್​ ಟಿವಿಗೆ ಖಚಿತಪಡಿಸಿದೆ.

RELATED ARTICLES

Related Articles

TRENDING ARTICLES