Tuesday, September 17, 2024

ಜನರ ಕಷ್ಟ ಕೇಳದೇ ಪಾದಯಾತ್ರೆ.. ಬಿಜೆಪಿಗೆ ನಾಚಿಕೆ ಆಗಲ್ವಾ?: ಸಚಿವ ಚೆಲುವರಾಯ ಸ್ವಾಮಿ

ರಾಮನಗರ: ಜನರ ಕಷ್ಟ ಕೇಳದೇ ಪಾದಯಾತ್ರೆ ಮಾಡುತ್ತಿದ್ದೀರಲ್ಲ ನಾಚಿಕೆ ಆಗಲ್ವಾ, ಬಿಜೆಪಿ ಪಾದಯಾತ್ರೆ ಅಸಹ್ಯ ಅನಿಸುತ್ತೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ್ರೆ ಬರಗಾಲ ಅಂತ ಬಿಜೆಪಿ- ಜೆಡಿಎಸ್ ನಾಯಕರು​ ಬೊಬ್ಬೆ ಹೊಡೆದರು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ದ ಬಿಜೆಪಿ-ದಳ ಇಂದಿನಿಂದ ಪಾದಯಾತ್ರೆ ಆರಂಭ

ಬಿಜೆಪಿ ಅವರು ಲಂಗು-ಲಗಾಮು ಇಲ್ಲದೇ ಮಾತನಾಡುತ್ತಾರೆ. ನಡವಳಿಕೆ, ಸಾಧನೆ ಇದ್ರೆ ಬಿಜೆಪಿ ಅವರ ಬಗ್ಗೆ ಮಾತನಾಡಬಹುದು. 130 ಸೀಟ್ ಗೆದ್ದು ಸರ್ಕಾರ ಮಾಡಿರೋ ಇತಿಹಾಸ ಬಿಜೆಪಿಗೆ ಇಲ್ಲ. ಜೆಡಿಎಸ್‌ನವರು ಬೇರೆಯವರ ಜತೆ ಸೇರಿ ಸರ್ಕಾರ ಮಾಡುತ್ತಾರೆ. ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಫೈಟ್​​​​​ ಮಾಡಿದ್ದರು. ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಫೈಟ್ ಮಾಡಿದ್ದರು. ಆದರೇ, ಈಗ ಇಬ್ಬರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES