Friday, September 20, 2024

ಕೇರಳ ಭೂಕುಸಿತ: ರಶ್ಮಿಕಾ ಮಂದಣ್ಣ ಸೇರಿ ಸಿನಿತಾರೆಯರಿಂದ ಆರ್ಥಿಕ ನೆರವು

ಕೇರಳ: ದೇವರನಾಡು ಕೇರಳದ ವಯನಾಡಿನಲ್ಲಿ ಉಂಟಾಗಿರುವ ಭೀಕರ ಭೂಕುಸಿತಕ್ಕೆ ಇಡೀ ರಾಜ್ಯವೇ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಭೀಕರ ದುರಂತಕ್ಕೆ ದೇಶದ ಎಲ್ಲಾ ಚಿತ್ರರಂಗಗಳ ಸಿನಿ ತಾರೆಯರು ಕಂಬನಿ ಮಿಡಿದಿದ್ದು, ಆರ್ಥಿಕ ನೆರವು ಘೋಷಿಸಿದ್ದಾರೆ. ಭೂಕುಸಿತದಿಂದಾಗಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಸಾವಿರಾರೂ ಜನರು ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಗುಡ್ಡ ಕುಸಿತ: 330ಕ್ಕೇರಿದ ಸಾವಿನ ಸಂಖ್ಯೆ

ಕೇರಳದ ಮುಖ್ಯಮಂತ್ರಿಗಳ ನಿಧಿಗೆ ಅನೇಕ ನಟ, ನಟಿಯರು ದೇಣಿಗೆ ನೀಡಿದ್ದಾರೆ. ಬಹುಭಾಷ ನಟ ಕಮಲ್​ ಹಾಸನ್​ ಸೇರಿದಂತೆ ಕನ್ನಡದ ರಶ್ಮಿಕಾ ಮಂದಣ್ಣ, ತಮಿಳು ನಟ ಸೂರ್ಯ, ಚಿಯಾನ್ ವಿಕ್ರಮ್, ಮಳಿಯಾಳಂ ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಅನೇಕ ನಟರು ನೆರವು ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕೇರಳದಲ್ಲಿ ಸಂಭವಿಸಿರುವ ಭೂಕುಸಿತ ದುರಂತ ಕಂಡು ಅಲ್ಲಿನ ಮುಖ್ಯಂತ್ರಿಗಳ ನಿಧಿಗೆ ನಟಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟಿಯ ಈ ಮಾನವೀಯ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ನಟ ಕಮಲ್ ಹಾಸನ್​ 25 ಲಕ್ಷ ರೂಪಾಯಿ, ತಮಿಳಿನ ನಟ ಚಿಯಾನ್ ವಿಕ್ರಮ್ 20 ಲಕ್ಷ ರೂಪಾಯಿ, ನಟ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಹಾಗೂ ನಟ ಕಾರ್ತಿ ಜಂಟಿಯಾಗಿ 50 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

RELATED ARTICLES

Related Articles

TRENDING ARTICLES