Thursday, September 19, 2024

ರಾಮಕೃಷ್ಣ ಆಶ್ರಮದಲ್ಲಿ ಬಾಲಕನಿಗೆ 3 ದಿನ ಕತ್ತಲ ಕೋಣೆಯಲ್ಲಿಟ್ಟು ಚಿತ್ರಹಿಂಸೆ

ರಾಯಚೂರು: ನಗರದ ಆಶ್ರಮ ಒಂದರಲ್ಲಿ ಆಶ್ರಮದಲ್ಲಿನ ವ್ಯಕ್ತಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಶ್ರಣವ್​​​​​ ಕುಮಾರ್​​​​ ಬಡತನವಿದ್ದ ಹಿನ್ನೆಲೆ ಆಶ್ರಮದಲ್ಲಿದ್ದ. ಆದರೇ, ಆಶ್ರಮದಲ್ಲಿದ್ದ ಪಿ.ವೇಣುಗೋಪಾಲ್​ ಎಂಬ ವ್ಯಕ್ತಿ ಶ್ರಣವ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮನಬಂದಂತೆ ಬಾಲಕನಿಗೆ ಥಳಿಸಿ, ಮೂರು ದಿನ ಕತ್ತಲೆ ಕೋಣೆಯಲ್ಲಿ ಕೋಡಿಹಾಕಿದ್ದಾನೆ.

ಇದನ್ನೂ ಓದಿ: ಭ್ರಷ್ಟಾಚಾರ ಪಿತಾಮಹ ಯಾರು? ವಿಜಯೇಂದ್ರ ಗಂಡಸಾಗಿದ್ರೆ ಹೇಳಲಿ: ಡಿಕೆ ಶಿವಕುಮಾರ್​

ಮೂರು ದಿನ ಮನಸೋಇಚ್ಛೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ. ಆಕಸ್ಮಿಕವಾಗಿ ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಬಾಲಕನ ತಾಯಿಗೆ ವಿಷಯ ಗೊತ್ತಾಗಿದೆ. ಬಳಿಕ ಚಂದ್ರಬಂಡ ರಸ್ತೆಯಲ್ಲಿನ ಜನತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES