Tuesday, September 17, 2024

ಸ್ವಾಮಿ PM ರಿಪೋರ್ಟ್​ ತಿರುಚೋ ಯತ್ನ ? ದರ್ಶನ್​ ಗ್ಯಾಂಗ್​ಗೆ ಗ್ರಿಲ್

ಫಿಲ್ಮ್ ಡೆಸ್ಕ್​: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲೂಟ ಸವಿಯುತ್ತಿರೋ ಡಿ ಗ್ಯಾಂಗ್​ಗೆ ಖಾಕಿ ಮತ್ತಷ್ಟು ಗ್ರಿಲ್ ಮಾಡ್ತಿದೆ. ಯೆಸ್..ಸಾಕ್ಷ್ಯನಾಶ ಮಾಡೋಕೆ ಹೇಗೆಲ್ಲಾ ಪ್ಲ್ಯಾನ್ ಮಾಡಿತ್ತು ಡಿ ಗ್ಯಾಂಗ್ ಅನ್ನೋದನ್ನ ನೀವು ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರೆಂಟಿ. ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್​ನೇ ತಿರುಚೋಕೆ ಯತ್ನಿಸಿದ್ದ ಡಿ ಗ್ಯಾಂಗ್​ಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅದ್ಹೇಗೆ ಅನ್ನೋ ಖತರ್ನಾಕ್ ಸ್ಟೋರಿಯ ಅಸಲಿಯತ್ತು ಇಲ್ಲಿದೆ.

ರೇಣುಕಾಸ್ವಾಮಿಯ ಕಿಡ್ನ್ಯಾಪ್, ಹಲ್ಲೆ, ಹತ್ಯೆ ಹಾಗೂ ಸಾಕ್ಷ್ಯನಾಶ ಪ್ರಕರಣಗಳಲ್ಲಿ ಈಗಾಗ್ಲೇ ಚಕ್ರವ್ಯೂಹದ ಒಳಗೆ ಸಿಲುಕಿಕೊಂಡಂತೆ ಇಡೀ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿ ಆಗಿದೆ. ಚಾರ್ಜ್​ಶೀಟ್ ಸಲ್ಲಿಕೆಗೆ ದಿನಗಳು ಸನಿಹಿಸುತ್ತಿವೆ. ಆದ್ರೆ ದಿನದಿಂದ ದಿನಕ್ಕೆ ಬಗೆದಷ್ಟೂ ಭಯಾನಕ ವಿಷಯಗಳು ಹೊರಬರುತ್ತಲೇ ಇವೆ. ಯೆಸ್.. ಡಿ ಗ್ಯಾಂಗ್​ಗೆ ನಿರಂತರವಾಗಿ ಖಾಕಿ ಗ್ರಿಲ್ ಮಾಡ್ತಾನೇ ಇದೆ.

ಸದ್ಯ ಈ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದೆ. A1 ಆರೋಪಿ ಆಗಿರೋ ಪವಿತ್ರಾ ಗೌಡ ಆಪ್ತ ಗೆಳತಿ ಸಮತಾ ಜೈಲ್​ಗೆ ಹೋಗಿ ಪವಿತ್ರಾ ಹಾಗೂ ದರ್ಶನ್​ನ ಮಾತನಾಡಿಸಿ ಹೊರಬಂದಮೇಲೆ ಖಾಕಿ ಕಣ್ಣು ಸಮತಾ ಮೇಲೆ ಬಿದ್ದಿದೆ. ಆಕೆಯನ್ನೂ ಸಹ ಕರೆಸಿ ಸಾಕಷ್ಟು ಬಾರಿ ವಿಚಾರಣೆ ನಡೆಸಿದೆ ಖಾಕಿ ಪಡೆ. ಆದ್ರೆ ಹೊಸ ವಿಷ್ಯ ಏನಪ್ಪಾ ಅಂದ್ರೆ ರೇಣುಕಾಸ್ವಾಮಿ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿರೋದು ಬೇರಾರೂ ಅಲ್ಲ, ಇದೇ ಸಮತಾರ ಪತಿ ಡಾ. ಸುರೇಶ್.

ಇದನ್ನೂ ಓದಿ: ಕಿಚ್ಚನ ಪ್ಯಾನ್ ಇಂಡಿಯಾ ಮ್ಯಾಕ್ಸಿಮಮ್ ದಂಡಯಾತ್ರೆ ಶುರು!: ಕಾಳಿ ಮುಂದೆ ಸ್ಟೆಪ್ಸ್​ಗೆ ಪ್ರೇಕ್ಷಕ ಸ್ಟನ್

ಯೆಸ್.. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಸಮತಾ ಪತಿ ಡಾ ಸುರೇಶ್, ಅಂದು ರಜೆ ಇದ್ದರಂತೆ. ಆದರೂ ಸಹ ತಾವೇ ಪೋಸ್ಟ್ ಮಾರ್ಟಂ ಮಾಡಿ, ಆ ವರದಿಯನ್ನ ತಿದ್ದುವ ಯತ್ನ ಮಾಡೋ ಸಲುವಾಗಿ ಅಂದು ಆಸ್ಪತ್ರೆಗೆ ಬಂದಿದ್ದರಂತೆ. ಹೀಗಾಗಿ ಡಾ ಸುರೇಶ್ ಅವರ ಕಾಲ್ ಡಿಟೇಲ್ಸ್, ವಾಟ್ಸಾಪ್ ಚಾಟ್ ಸೇರಿದಂತೆ ಸಾಕಷ್ಟು ಸಾಕ್ಷ್ಯಗಳನ್ನ ಪರಿಶೀಲಿಸುತ್ತಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ಅಂದಹಾಗೆ ಅಂದು ಖಾಕಿ ಕೊಂಚ ಯಾಮಾರಿದ್ರೂ ಸಹ ಸ್ವಾಮಿಯ ಪಿಎಂ ರಿಪೋರ್ಟ್​ ಬದಲಾಗೋದ್ರಲ್ಲಿ ಅನುಮಾನವೇ ಇಲ್ಲ.

ಅಂದೇ ಪೊಲೀಸ್ ಪಡೆ ಎಚ್ಚೆತ್ತುಕೊಂಡು ಸ್ಟ್ರಿಕ್ಟ್ ಮಾಡಿದ ಹಿನ್ನೆಲೆ PM ರಿಪೋರ್ಟ್​ ಪಕ್ಕಾ ಬಂದಿದೆ ಎನ್ನಲಾಗ್ತಿದೆ. ಆದ್ರೆ ಸಾಕ್ಷ್ಯನಾಶ ಮಾಡೋಕೆ ಸಮತಾ- ಸುರೇಶ್ ಪ್ರಯತ್ನಿಸಿದ್ದರಾ..? ಪವಿತ್ರಾ ಹಾಗೂ ದರ್ಶನ್ ಕೂಡ ಇದರಲ್ಲಿ ಭಾಗಿಯಾಗಿದ್ರಾ ಅನ್ನೋದನ್ನ ಮುಚ್ಚುಮರೆಯಿಲ್ಲದೆ ತನಿಖೆ ನಡೆಸುತ್ತಿದೆ ಖಾಕಿ. ಒಂದು ವೇಳೆ ಇದು ಸಾಬೀತಾದಲ್ಲಿ ಸಮತಾ- ಸುರೇಶ್​ಗೂ ಕಂಬಿ ಎಣಿಸೋ ಪ್ರಮೇಯ ತಪ್ಪಿಲ್ಲ. ಅಲ್ಲದೆ ಒಳಗಿರೋ ಡಿ ಗ್ಯಾಂಗ್​ಗೆ ಬೇಲ್ ಸಿಗೋದು ಮತ್ತಷ್ಟು ವಿಳಂಬ ಆಗೋದ್ರಲ್ಲಿ ಡೌಟೇ ಇಲ್ಲ.

ಇನ್ನು ಡಿಬಾಸ್ ದರ್ಶನ್ ಸದ್ಯ ಜೈಲಲ್ಲಿ ಮೊಟ್ಟೆ ಬಾಸ್ ಆಗಿರೋ ವಿಷ್ಯ ಎಲ್ರಿಗೂ ಗೊತ್ತೇಯಿದೆ. ತಂದೆಗಿಲ್ಲದ ಕೇಶ ನನಗ್ಯಾಕೆ ಅಂತ ದರ್ಶನ್ ಪುತ್ರ ವಿನೀಶ್ ಕೂಡ ಕೇಶಮುಂಡನ ಮಾಡಿಸಿಕೊಂಡಿದ್ದಾರಂತೆ. ಜೈಲಲ್ಲಿ ಅಪ್ಪನನ್ನ ಭೇಟಿ ಆಗಲು ತೆರಳಿದ್ದ ವಿನೀಶ್, ನಿಮ್ಮನ್ನ ಕೂದಲಿಲ್ಲದೆ ನೋಡೋಕಾಗ್ತಿಲ್ಲ ಅಪ್ಪ ಅಂತ ಭಾವುಕರಾಗಿದ್ದಾರೆ. ಅಲ್ಲದೆ ನಾನು ಕೂಡ ಕೂದಲು ತೆಗೆದಿದ್ದೇನೆ ಎಂದ ವಿನೀಶ್ ಮಾತು ಕೇಳಿ, ಗಟ್ಟಿಯಾಗಿ ತಬ್ಬಿ, ಕಣ್ಣೀರು ಹಾಕಿದ್ದಾರೆ ದಾಸ.

ಒಟ್ಟಾರೆ ದಿನದಿಂದ ದಿನಕ್ಕೆ ದರ್ಶನ್ ಹೊರಬರುವ ಮುನ್ಸೂಚನೆ ಕಮ್ಮಿ ಆಗ್ತಿದೆ. ಕಾತರದಿಂದ ಕಾಯ್ತಿರೋ ಅಭಿಮಾನಿಗಳ ಭರವಸೆಗಳು ಬತ್ತಿ ಹೋಗ್ತಿವೆ. ಖಾಕಿ ಕೂಡ ಅಷ್ಟೇ ಚುರುಕಾಗಿ ತನಿಖೆ ಮುಂದುವರೆಸಿದೆ. ಮುಂದಿನ ದಿನಗಳಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಯಾವ ರೂಪ ಪಡೆಯುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES