Friday, September 20, 2024

ನಟ ದರ್ಶನ್​ ಜೈಲು ಸೇರಿ ಇಂದಿಗೆ ಒಂದು ತಿಂಗಳು!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜೈಲುಪಾಲಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ.

ಪವಿತ್ರಾಗೌಡ ಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾಡಿ ಬೆಂಗಳೂರಿನ ಪಟ್ಟಣಗೆರೆ ಕಾರ್​ ಶೆಡ್​ ಒಂದರಲ್ಲಿ ಇರಿಸಿ ಹಲ್ಲೆ, ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್​ ಸೇರಿ ಸಹಚರರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದೆ.

ಇದನ್ನೂ ಓದಿ:  ನಟ ದರ್ಶನ್​ ಭೇಟಿಗೆ ಬಂದ ಅಕ್ಕ, ಭಾವ ಮತ್ತು ಅಳಿಯ

ಜೂನ್​ 11ರಂದು ಮೈಸೂರಿನಲ್ಲಿ ನಟ ದರ್ಶನ್​ ರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿರಿಸಲಾಗಿದೆ. ನಟ ದರ್ಶನ್​ ಜೈಲುಪಾಲಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ.

ಸದ್ಯ ಪರಪ್ಪನ ಅಗ್ರಹಾರದ ಜೈಲಿನ ಒಂದೇ ಕೋಣೆಯಲ್ಲಿ ಮಂಕಾಗಿರುವ ನಟ ದರ್ಶನ್​ ಅವರ ಭೇಟಿಗೆ ಕುಟುಂಬಸ್ಥರು ಆಗಮಿಸಿದ್ದರು. ದರ್ಶನ್​ ರ ಅಕ್ಕ, ಭಾವ, ಅಳಿಯ ಬಂದಿದ್ದರು. ಬಳಿಕ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್​ ಕೂಡ ಭೇಟಿ ನೀಡಿದ್ದರು. ಇದೇ ವೇಳೆ ಬೇಲ್​ ಕುರಿತು ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕೆಲ ಮಾತುಕತೆಯಾಡಿದ್ದರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES