Tuesday, September 17, 2024

ನಟ ದರ್ಶನ್​ ಭೇಟಿಗೆ ಬಂದ ಅಕ್ಕ, ಭಾವ ಮತ್ತು ಅಳಿಯ

ಬೆಂಗಳೂರು: ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಕರಣದ ಎ2 ಆರೋಪಿ ದರ್ಶನ್​ ಅವರನ್ನು ಭೇಟಿ ಮಾಡಲು ಇಂದು ದರ್ಶನ್​ ಸಹೋದರಿ ಮತ್ತು ಕುಟುಂಬದವರು ಆಗಮಿಸಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮದ ಸುಳಿಯಲ್ಲಿ ಶಾಸಕರ ಪಿಎ! ದದ್ದಲ್​ಗೂ ಸಂಕಷ್ಟನಾ?

ಈಗಾಗಲೇ ಜೈಲಿನಲ್ಲಿರುವ ನಟ ದರ್ಶನ್​ ಅವರಿಗೆ ಜೈಲು ಊಟ ಸೇವನೆ ಮಾಡಿ ವಾಂತಿ, ಬೇದಿ ಶುರುವಾಗಿದೆ, ಆರೋಗ್ಯ ಸಮಸ್ಯೆ ಉಂಟಾಗಿದ್ದು ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಸಹೋದರನ ಆರೋಗ್ಯ ವಿಚಾರಸಲು ದರ್ಶನ್​ ರ ಅಕ್ಕ, ಭಾವ ಹಾಗು ಅಳಿಯ ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು.

ದರ್ಶನ್​ಗಾಗಿ ಮನೆಯಿಂದಲೇ ಎರಡು ಬ್ಯಾಗ್​ಗಳನ್ನು ತರಲಾಗಿತ್ತು, ಒಂದು ಬ್ಯಾಗ್​ನಲ್ಲಿ ಬೆಡ್​ಶೀಟ್​ ಇನ್ನೊಂದು ಬ್ಯಾಗ್​ನಲ್ಲಿ ಬಟ್ಟೆಗಳನ್ನು ಹೊತ್ತು ಅಳಿಯ ಚಂದನ್​ ಜೈಲಿನಲ್ಲಿರುವ ದರ್ಶನ್​ರನ್ನು ಭೇಟಿಯಾಗಿದ್ದಾರೆ.

RELATED ARTICLES

Related Articles

TRENDING ARTICLES