Tuesday, September 17, 2024

ದೊಡ್ಮನೆಯಲ್ಲಿ ಡಿವೋರ್ಸ್​ ಬಿರುಗಾಳಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಯುವರಾಜ್​ ಕುಮಾರ್​

ದೊಡ್ಮನೆಯಲ್ಲಿ ಡಿವೋರ್ಸ್​ ಬಿರುಗಾಳಿ ಎದ್ದಿದ್ದು, ಹಿರಿಯ ನಟ ರಾಘವೇಂದ್ರ ರಾಜ್​ ಕುಮಾರ್​ ಕಿರಿಯ ಪುತ್ರ ನಟ ಗುರು@ ಯುವರಾಜ್​ ಕುಮಾರ್​ ರಾಘವೇಂದ್ರ ಅವರು ತಮ್ಮ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ರಾಘವೇಂದ್ರ ರಾಜ್​ ಕುಮಾರ್​ ಅವರ ದ್ವಿತೀಯ ಪುತ್ರ ನಟ ಯುವರಾಜ್​ ಕುಮಾರ್​ ಅವರು ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಚೇದನ​ ಕೋರಿ ಜೂನ್​.6 ರಂದು ಫ್ಯಾಮಿಲಿ ಕೋರ್ಟ್​ ಗೆ ಅರ್ಜಿಸಲ್ಲಿಸಿದ್ದಾರೆ. ಎಂಸಿ ಆ್ಯಕ್ಟ್ ಸೆಕ್ಷನ್‌ 13(1)(ia) ಅಡಿಯಲ್ಲಿ ದೂರು ದಾಖಲಾಗಿದೆ. ಅರ್ಜಿಗೆ ಸಂಬಂಧಿಸಿ ಫ್ಯಾಮಿಲಿ ಕೋರ್ಟ್​ ಈಗಾಗಲೇ ಯುವರಾಜ್​ ಪತ್ನಿ ಶ್ರೀದೇವಿಗೆ ನೋಟೀಸ್​ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲವು ಜುಲೈ 4 ರಂದು ನಿಗಧಿಪಡಿಸಿದೆ.

ನಟ ಯುವರಾಜ್​ ಸಲ್ಲಿಸಿರುವ ವಿಚ್ಚೇದನ ಅರ್ಜಿಯಲ್ಲಿ ತಮ್ಮ ಪತ್ನಿ ವಿರುದ್ದ ಹಲವು ಕಾರಣಗಳನ್ನು ನೀಡಿದ್ದಾರೆ. ಈ ಪೈಕಿ ಕ್ರೌರ್ಯ, ಅಗೌರವದಿಂದ ನಡೆದುಕೊಂಡ ಆರೋಪ, ಮಾನಸಿಕವಾಗಿ ಟಾರ್ಚರ್‌ ಸೇರಿದಂತೆ ಹಲವು ಕಾರಣಗಳ ಯವ ನೀಡಿದ್ದಾರೆ.

ಯುವರಾಜ್​ ಪತ್ನಿ ಶ್ರೀದೇವಿ ಭೈರಪ್ಪ ಈಗಾಗಲೇ ಪತಿಯಿಂದ ದೂರವಾಗಿ ಹಲವು ತಿಂಗಲುಗಳಿಂದ ಅಂತರ ಕಾಯ್ದುಕೊಂಡು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ಇತ್ತಿಚೆಗೆ ‘ಯುವ’ ಸಿನಿಮಾ ಶೂಟಿಂಗ್, ಸಕ್ಸಸ್ ಮೀಟ್‌ನಿಂದಲೂ ದೂರ ಉಳಿದಿದ್ದಾರೆ.

ಮೈಸೂರು ಮೂಲದ ಶ್ರೀದೇವಿ ಜೊತೆ 4 ವರ್ಷಗಳ ಹಿಂದೆ ಯುವರಾಜ್​ ಜೊತೆ ಲವ್ ಕಂ ಅರೇಂಜ್ ಮ್ಯಾರೇಜ್ ಆಗಿದ್ದರು. ಬಳಿಕ ಡಾ.ರಾಜ್‌ಕುಮಾರ್ ಹೆಸರಿನಲ್ಲಿರುವ IAS ಅಕಾಡೆಮಿ ಕೋಚಿಂಗ್‌ ಸೆಂಟರ್‌ ನಡೆಸಿಕೊಂಡು ಹೋಗುತ್ತಿದ್ದರು.

ಡೈವೋರ್ಸ್​ ಕುರಿತು ಯುವ ಪತ್ನಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ:

ನಟ ಯುವರಾಜ್​ ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಮದುವೆ ವಿಚ್ಚೇದನಕ್ಕೆ ಸಂಬಂಧಿಸಿ ಯುವ ಪತ್ನಿ ಶ್ರೀದೇವಿ ಅಮೇರಿಕಾದಲ್ಲಿದ್ದು ಪವರ್ ಟಿವಿ ಜೊತೆಗೆ ಮಾತನಾಡಿದ್ದಾರೆ. ನೀಡಿರುವ ಅವರು, ಸದ್ಯಕ್ಕೆ ಈ ಕುರಿತು ಏನನ್ನೂ ಮಾತನಾಡೋದಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES