Tuesday, September 17, 2024

ಜಿಲ್ಲಾಧಿಕಾರಿಗಳ ಹೆಸರಲ್ಲಿ PSI ಗಳಿಗೆ ಹಣಕ್ಕೆ ಬೇಡಿಕೆ ಇಟ್ಟ ಅನಾಮಿಕ

ಬೆಂಗಳೂರು ಗ್ರಾಮಾಂತರ: ಫೋನ್​ ಪೇ ಮೂಲಕ ಖಾತೆಗೆ ಹಣ ಕಳಿಸುವಂತೆ ದೇವನಹಳ್ಳಿ ತಾಲೂಕಿನ ವಿವಿಧ ಪೊಲೀಸ್​ ಠಾಣಾ ಇನ್ಸ್​​ಪೆಕ್ಟರ್​ ಮತ್ತು PSIಗಳಿಗೆ ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್​ ಅವರ ಹೆಸರಿನಲ್ಲಿ ಅನಾಮಿಕ ವ್ಯಕ್ತಿ ಮೆಸೆಜ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಇನ್ಸ್​ಪೆಕ್ಟರ್​ ಪ್ರಶಾಂತ್, ಚನ್ನರಾಯಪಟ್ಟಣ ಪಿಎಸ್​ಐ ಅಣ್ಣಯ್ಯ, ಪಿಎಸ್​ಐ ನಂದೀಶ್​​ ರಿಗೆ ಹಣಕ್ಕೆ ಬೇಡಿಕೆ ಇಡಲಾಗಿದೆ. ವಾಟ್ಸಾಪ್​ ಡಿಪಿಯಲ್ಲಿ ಜಿಲ್ಲಾಧಿಕಾರಿಗಳ ಫೋಟೋ ಬಳಸಿ ಮೂವರು ಪೊಲೀಸ್​ ಅಧಿಕಾರಿಗಳಿಗೆ ಮೆಸೇಜ್​ ಮಾಡಲಾಗಿದ್ದು ಪ್ರತಿಯೊಬ್ಬರು 50 ಸಾವಿರ ನೀಡುವಂತೆ ಸಂದೇಶದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಪತ್ನಿಯನ್ನು ಹೆದರಿಸಲು ಹೋದ ಜಿಮ್​ ಟ್ರೈನರ್ ನೇಣು ಕುಣಿಕೆಗೆ ಬಲಿ

​94768217403 ಮೊಬೈಲ್​ ಸಂಖ್ಯೆಯಿಂದ ಪೋಲಿಸ್ ಅಧಿಕಾರಿಗಳಿಗೆ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟ ಅನಾಮಿಕ ಹಣವನ್ನು 8884470191 ಸಂಖ್ಯೆಗೆ ತುರ್ತಾಗಿ 50 ಸಾವಿರ ಕಳಿಸುವಂತೆ ತಿಳಿಸಿದ್ದಾರೆ.

ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್​ ಅವರ ಆಪ್ತ ಸಹಾಯಕ ಅಭಿಶೇಕ್ ರಿಂದ ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ PSI ಅಣ್ಣಯ್ಯ ಗೆ ಹಣಕ್ಕೆ ಡಿಮ್ಯಾಂಡ್ ಇಟ್ಟು ಮೆಸೇಜ್ ಮಾಡಿದ್ದ ಸಂದೇಶದ ಮೊಬೈಲ್ ಸ್ಕ್ರೀನ್ ಶಾಟ್ ಉಲ್ಲೇಖಿಸಿ ದೂರು ದಾಖಲಿಸಲಿಸಿದ್ದಾರೆ.

RELATED ARTICLES

Related Articles

TRENDING ARTICLES