Thursday, May 2, 2024

ಸರ್ಕಾರವನ್ನ ಯಾರೋ ‘ಡಾನ್’ಗಳು ನಡೆಸುತ್ತಿದ್ದಾರೆ : ಅಶೋಕ್ ಕಿಡಿ

ಬೆಂಗಳೂರು : ಕರ್ನಾಟಕದಲ್ಲಿರೋ ಸರ್ಕಾರ ನಾಚೀಕೆಗೇಡಿನ ಸರ್ಕಾರ. ಕರ್ನಾಟಕ ಸರ್ಕಾರವನ್ನ ಯಾರೋ ಡಾನ್​ಗಳು ನಡೆಸ್ತಿದ್ದಾರೆ‌ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಜಿಹಾದಿಗಳ ರಾಜ್ಯವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಕಗ್ಗೊಲೆ, ಅವಮಾನ, ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಕೊಲೆ ಪ್ರಕರಣ ರಾಜ್ಯವೇ ತಲೆ ತಗ್ಗಿಸುವಂತ ಘಟನೆ. ಸುರಕ್ಷಿತ ಪ್ರದೇಶದ ಕಾಲೇಜು ಆವರಣದಲ್ಲಿ ಮತಾಂಧ ಮುಸ್ಲಿಂ ಯುವಕನೊಬ್ಬ ಯುವತಿಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳನ್ನು ನೋಡಿದ್ರೆ ನಾಚಿಕೆಗೇಡು. ಕರ್ನಾಟಕವನ್ನು ಗೂಂಡಾಗಳಿಗೋ, ಡಾನ್​ಗಳಿಗೆ ಕೊಟ್ಟು ಆಡಳಿತ ನಡೆಸ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ

ಯುವತಿ ಪೋಷಕರು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಕಾಂಗ್ರೆಸ್​ನ ಕಾರ್ಪೋರೇಟ್ ಇದು ಲವ್ ಜಿಹಾದ್ ಎಂದಿದ್ದಾರೆ. ನೀವು ಲವ್ ಕೇಸ್ ಅಂತ ಆ ಕುಟುಂಬಕ್ಕೆ ಅವಮಾನ ಮಾಡ್ತೀರಿ. ಚುನಾವಣೆ ಸಂದರ್ಭದಲ್ಲಿ ಇಶ್ಯೂ ಆಗಬಾರದು ಎಂದು ಸಿದ್ದರಾಮಯ್ಯ ಈ ರೀತಿ ಮಾಡ್ತಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತೆ ಕಾಂಗ್ರೆಸ್​ನವರು ನಡೆದುಕೊಳ್ತಿದ್ದಾರೆ. ಲವ್ ಜಿಹಾದ್ ಮಾಡೋರಿಗೆ ಪಾಸ್ ಪೋರ್ಟ್, ಗಲಭೆ ಮಾಡೋರಿಗೆ ವೀಸಾ ಕೊಟ್ಟು ಬಿಟ್ಟಿದ್ದಾರೆ ಎಂದು ಆರ್​. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES