Tuesday, September 17, 2024

ಕಾಡಾನೆ ದಾಳಿ : ಮಾದಪ್ಪನ ದರ್ಶನಕ್ಕೆ ಬಂದ ಭಕ್ತೆ ಮಸಣಕ್ಕೆ!

ಚಾಮರಾಜನಗರ : ಚಾಮರಾಜನಗರದ ಹನೂರು ತಾಲ್ಲೂಕಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಮಂಗಳವಾರ ಸಂಜೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರೊಬ್ಬರು ಆನೆ ದಾಳಿಗೆ ಮೃತರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನ ಹೊನ್ನೇನಳ್ಳಿಯ ಲಕ್ಷ್ಮಿ ಮೃತಪಟ್ಟವರು. ಹೊನ್ನೇನಳ್ಳಿ ಗ್ರಾಮದಿಂದ ಒಟ್ಟು ಎಂಟು ಮಂದಿ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು.

ಈ ಪೈಕಿ ಲಕ್ಷ್ಮಿ, ಪದ್ಮಮ್ಮ, ಪುಟ್ಟರಾಜು ಅವರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಆನೆ ತಲೆದಿಂಬ ಸಮೀಪ ಕಾಡಾನೆ ಹಠಾತ್ ದಾಳಿ ಮಾಡಿದೆ. ಆನೆ ತುಳಿತಕ್ಕೆ ಒಳಗಾದ ಲಕ್ಷ್ಮಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿಲ್ಲರ್ ಬಿಎಂಟಿಸಿಗೆ ಯುವಕ ಬಲಿ

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಬಿಎಂಟಿಸಿ ಬಸ್​ಗೆ ಯುವಕ ಬಲಿಯಾಗಿದ್ದಾನೆ.18 ವರ್ಷದ ಕಮಲೇಶ್ ಮೃತ ದುರ್ದೈವಿ. ಸ್ನೇಹಿತನ ಭೇಟಿ ಮಾಡಲು ತೆರಳ್ತಿದ್ದ ಕಮಲೇಶ್​​​ ಬಸ್​ನ ಒವರ್ ಟೆಕ್ ಮಾಡಲು ಹೋಗಿ ಬಸ್​ಗೆ ಗುದ್ದಿದ್ದಾನೆ. ಸ್ಥಳೀಯರು ಕಮಲೇಶನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಈ ಸಂಬಂಧ ಶಿವಾಜಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES