ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಕುರಿತು ಉಂಟಾಗಿರವ ಗೊಂದಲಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕೋಲಾರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಅದಕ್ಕಾಗಿಯೇ ನಾಮ್ಮ ಪಕ್ಷದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡೋದನ್ನ ಮುಂದಕ್ಕೆ ಹಾಕಿದ್ದೇವೆ ಎಂದರು.
ಇದನ್ನೂ ಓದಿ: ಕೋಲಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲ ಶಮನ ಆಗುತ್ತೆ : ಡಿಕೆ ಶಿವಕುಮಾರ್
ನಾವು ಯಾರನ್ನೋ ತೆಗೆದುಕೊಳ್ಳೋಕೆ ಕಾಯ್ತಿದ್ದೇವೆ ಅಂತ ಅಲ್ಲ. ನಮ್ಮಲ್ಲಿ ಈಗಾಗಲೇ ಎರಡು ಪಂಗಡದ ಅಭ್ಯರ್ಥಿಗಳು ಇದ್ದಾರೆ. ಅಂತಿಮವಾಗಿ ಕೋಲಾರ ಜನರ ಭಾವನೆಗೆ, ಕಾರ್ಯಕರ್ತರು, ಮುಖಂಡರ ಭಾವನೆಗಳಿಗೆ ಬೆಲೆ ಕೊಟ್ಟು ಪಕ್ಷದಲ್ಲಿ ಇರೋರನ್ನೆ ಅಭ್ಯರ್ಥಿಯಾಗಿ ಘೋಷಣೆ ಮಾಡ್ತೀವಿ. ಈಗಾಗಲೇ ಕೋಲಾರಕ್ಕೆ ಸಂಬಂಧಿಸಿ ಒಂದು ಪಟ್ಟಿ ಮಾಡಿದ್ದೇವೆ. ಅ ಪಟ್ಟಿ ಬದಲಾವಣೆ ಇಲ್ಲ. ಆದ್ರೆ, ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಾಯುತ್ತಿದ್ದೇನೆ ಎಂದು ಅವರು ಹೇಳಿದರು.