ಬೆಂಗಳೂರು : ಹಲವರು ನಿತ್ಯ ತಮ್ಮ ಭವಿಷ್ಯ ನೋಡಿ ದಿನಚರಿ ಆರಂಭಿಸುತ್ತಾರೆ. ಹಾಗಿದ್ರೆ, ನಿಮ್ಮ ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಂದಿನ ರಾಶಿ ಭವಿಷ್ಯ ಇಲ್ಲಿದೆ ನೋಡಿ.
- ಮೇಷ ರಾಶಿ
ಇಂದು ಪ್ರಿಯಕರ ಅಥವಾ ಪ್ರೇಯಸಿಯಿಂದ ದುಃಖ ಉಂಟಾಗಬಹುದು. ಸಣ್ಣ ವಿಷಯಕ್ಕೆ ಸಂಗಾತಿ ಜೊತೆ ಭಿನ್ನಾಭಿಪ್ರಾಯ ಬೇಡ.
- ವೃಷಭ ರಾಶಿ
ಪ್ರೇಮದಲ್ಲಿ ಹಿನ್ನಡೆ, ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ತಾಳ್ಮೆಯಿಂದ ಇರುವುದು ಉತ್ತಮ.
- ಮಿಥುನ ರಾಶಿ
ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಸಂಬಳ ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗ ಹುಡುಕುವಿರಿ.
- ಕರ್ಕ ರಾಶಿ
ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ನಿಮ್ಮ ಕೆಲಸಕ್ಕೆ ಮಕ್ಕಳಿಂದ ತೊಂದರೆಯಾಗಬಹುದು.
- ಸಿಂಹ ರಾಶಿ
ಇಂದು ವಿದ್ಯಾರ್ಥಿಗಳಿಗೆ ಶುಭದಿನ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ. ಇಂದು ದಾನ ಮಾಡುವುದರಿಂದ ಮನಸ್ಸಿಗೆ ತೃಪ್ತಿ.
- ಕನ್ಯಾ ರಾಶಿ
ರಾಜಕೀಯ ನಾಯಕರಿಗೆ ತುಂಬಾ ಒಳ್ಳೆಯ ದಿನ. ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಯಾಗುವ ಸಾಧ್ಯತೆ.
- ತುಲಾ ರಾಶಿ
ಸಣ್ಣ ವಿಷಯಗಳಿಗೆ ಜಗಳ ಆಗಬಹುದು. ಮಾಡುವ ಕೆಲಸದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ.
- ವೃಶ್ಚಿಕ ರಾಶಿ
ನಿಮ್ಮ ಮನಸ್ಸು ಸ್ವಲ್ಪ ಅತೃಪ್ತಿಯಿಂದ ಕೂಡಿರುತ್ತದೆ. ಬೇಡದ ವಿಷಯಗಳಲ್ಲಿ ಆಸಕ್ತಿ ವಹಿಸುವುದು ಅಪಾಯ ಅಥವಾ ಸಂಕಷ್ಟ ತರಲಿದೆ.
- ಧನು ರಾಶಿ
ಪತಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಸಂತೋಷ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳು ನಿಮ್ಮನ್ನು ಬಹಳ ಹೊಗಳಬಹುದು.
- ಮಕರ ರಾಶಿ
ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯುವ ಸಾಧ್ಯತೆ. ಸಂಸಾರದ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ.
- ಕುಂಭ ರಾಶಿ
ಬೇಡ ಕೆಲಸಗಳಿಗೆ ಹೆಚ್ಚು ಹಣ ಖರ್ಚಾಗಬಹುದು. ಕೆಲಸದ ಸ್ಥಳದಲ್ಲಿ ಪೈಪೋಟಿಯಿಂದ ತೊಂದರೆ ಉಂಟಾಗುವ ಸಾಧ್ಯತೆ.
- ಮೀನ ರಾಶಿ
ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಜೀವನದಲ್ಲಿ ಕೆಲವು ಸಮಸ್ಯೆ ಎದುರಾಗುವ ಸಾಧ್ಯತೆ.