ರಾಯಚೂರು: ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ನಮ್ಮಗೂ ಸಂಬಂಧವಿಲ್ಲ ಯಾವುದೇ ಸಂಬಂಧವಿಲ್ಲ ಅದು ಅವರ ವೈಯತ್ತಿಕ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆಯೇ ಇಂದು ಸರ್ಕಾರ ನಡೆಯುತ್ತಿದೆ.ಭಗವದ್ಗೀತೆ, ರಾಮಾಯಣಕ್ಕೆ ಯಾವ ರೀತಿ ಗೌರವಿಸುತ್ತೇವೋ ಅದೇ ರೀತಿ ಭಾರತ ಸಂವಿಧಾನಕ್ಕೆ ಗೌರವ ಕೊಡುತ್ತೇವೆ ಅನಂತ್ ಕುಮಾರ್ ಹೆಗಡೆ ಯಾವ ಅರ್ಥದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಈ ಹೇಳಿಕೆ ಅನಂತ್ ಕುಮಾರ್ ಅವರ ವೈಯಕ್ತಿಕ ಹೇಳಿಕೆ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಸಿಎಂ ರಕ್ತಪಾತ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ಸಂವಿಧಾನ ವಿಚಾರ ಬಂದಾಗ ಕಾಂಗ್ರೆಸ್ ನಾಯಕರು ದುರುಪಯೋಗ ಮಾಡಿಕೊಳ್ಳುತ್ತ ಇದ್ಧಾರೆ.ಅಂಬೇಡ್ಕರ್ ಬರೆದ ಸಂವಿಧಾನ ರೀತಿಯಲ್ಲೇ ಪ್ರಧಾನಿ ಮೋದಿ ಸರ್ಕಾರ ನಡೆಸುತ್ತಿದ್ದಾರೆ.ಆಕಾಶ ಭೂಮಿ ಒಂದಾದ್ರೂ ಸಹ ಅಂಬೇಡ್ಕರ್ ಬರೆದ ಸಂವಿಧಾನದ ಒಂದು ಶಬ್ಧ ಕೂಡ ಬದಲಾಗಲ್ಲ ಸಂವಿಧಾನ ಬದಲು ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ನರೇಂದ್ರ ಮೋದಿಯವರು ಸಂವಿಧಾನ ವಿಚಾರದಲ್ಲಿ ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡ್ತಿದ್ದಾರೆ.ವೈಯಕ್ತಿಕ ವಿಚಾರಗಳಿಗೆ ಪಾರ್ಟಿಗೆ ಯಾವುದೇ ಸಂಬಂಧ ಇಲ್ಲನಮ್ಮ ಪಕ್ಷ ಸ್ಪಷ್ಟವಾಗಿ ಹೇಳಿದೆ ನಮಗೂ ಅವರ ಹೇಳಿಕೆಗೂ ಸಂಬಂಧ ಇಲ್ಲ ಎಂದರು.