ಬೆಂಗಳೂರು : ಮಜಾವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಲೀಪಿಂಗ್ ಸರ್ಕಾರದ ಬುಡ ಅಲುಗಾಡಲು ಆರಂಭವಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಚನ್ನಗಿರಿಯ ಶಾಸಕ ಶಿವಗಂಗಾ ಬಸವರಾಜ್ ಅಸಮಾಧಾನ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಷ್ಟಿದೆ ಎಂದರೆ, ಅಧಿಕಾರ ಹಿಡಿದ ಹತ್ತೇ ಹತ್ತು ತಿಂಗಳಿಗೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವುದಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ಕುಟುಕಿದೆ.
ಚನ್ನಗಿರಿಯ ಶಾಸಕ ಶಿವಗಂಗಾ ಬಸವರಾಜ್ ಅವರು ಈಗಾಗಲೇ ರಾಜೀನಾಮೆ ಕೊಡಲು ಸಮಯಕ್ಕೆ ಕಾದು ಕೂತಿದ್ದಾರೆ. ಅನುದಾನವಿಲ್ಲ, ಸಚಿವರ ಅಭಯ ಹಸ್ತವಿಲ್ಲ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಆಗುತ್ತಿಲ್ಲವೆಂಬ ಹತ್ತಾರು ಸಮಸ್ಯೆಗಳಲ್ಲಿ ಶಾಸಕರು ಬಸವಳಿದು ಹೋಗಿದ್ದಾರೆ ಎಂದು ಕುಹಕವಾಡಿದೆ.
ಈ ಸುದ್ದಿ ಓದಿದ್ದೀರಾ? : ವಯಸ್ಸು 22, ಪಂದ್ಯ 9, 3 ಶತಕ, 2 ದ್ವಿಶತಕ : 1,451 ಬಾಲ್ಗಳಲ್ಲಿ 1,004 ರನ್ ಚಚ್ಚಿದ ‘ರೆಕಾರ್ಡ್ ಕಿಂಗ್’
ಬಡವರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ
ರಾಜ್ಯದಲ್ಲಿ ಬಡವರು, ನಿರ್ಗತಿಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದರೆ, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರವನ್ನೇ ಉರುಳಿಸಲು ನೋಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.