ಹಾವೇರಿ: ಹಂದಿಗಳ ಕಾಟಕ್ಕೆ ಬೆಸತ್ತು ಹೆಂಡತಿ ಮಕ್ಕಳು ಮನೆಬಿಟ್ಟು ಹೋಗಿರುವ ವಿಚಿತ್ರ ಘಟನೆ ಹಿರೆಕೇರೂರು ತಾಲೂಕು ರಟ್ಟಿಹಳ್ಳಿಯಲ್ಲಿ ನಡೆದಿದೆ.
ಹೌದು, ನಮ್ಮ ಮನೆ ಹತ್ತಿರ ಹಂದಿಗಳು ಹೆಚ್ಚಾಗಿದ್ದು ಎರಡು ಮಕ್ಕಳು ಆಚೆ ಬರಲು ಹೆದರುತ್ತವೆ ಎಂದು ಮಕ್ಕಳನ್ನ ಕರೆದುಕೊಂಡು ನನ್ನ ಹೆಂಡತಿ ತವರು ಮನೆಗೆ ಹೋಗಿದ್ದಾಳೆ. ಮರಳಿ ಮನೆಗೆ ಬರಲು ಕರೆದರೆ ಹಂದಿ ಗಳನ್ನ ಹಿಡಿಸಿ ನಂತರ ಬರುತ್ತೇನೆ ಎಂದು ಹೇಳಿದ್ಧಾಳೆ ಇದಕೆಲ್ಲಾ ನೀವೇ ಕಾರಣ ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ದ ಅರೆ ಬೆತ್ತಲೆ ಪ್ರತಿಭಟನೆ ವಿರೇಶ್ ಮಾಡುತ್ತಿದ್ದಾರೆ.
ಮನೆಯ ಅಕ್ಕ ಪಕ್ಕದಲ್ಲಿ ಹಂದಿಗಳ ಓಡಾಟಕ್ಕೆ ಹೆದರಿ ಕುಟುಂಬದವರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ ಎಂದು ಬೆಳಗಿನಿಂದ ನೀರು ಕುಡಿಯದೆ ಅರೆ ಬೇತ್ತಲೆಯಾಗಿ ಅಧಿಕಾರಿಗಳಿಗೆ ಧಿಕ್ಕಾರ ಎಂದು ಕೂಗಿ ಪ್ರತಿಭಟನೆ ಮಾಡುತ್ತಿದ್ದಾನೆ.