Thursday, September 19, 2024

ಕಾಂಗ್ರೆಸ್​ನವರು ಅಯೋಗ್ಯ ನನ್ನ ಮಕ್ಕಳು : ಶಾಸಕ ಯತ್ನಾಳ್

ವಿಜಯಪುರ : ಕಾಂಗ್ರೆಸ್​ನವರು ಅಯೋಗ್ಯ ನನ್ನ ಮಕ್ಕಳು. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೇ ಹೋಗಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗಲೇ ಹೇಳಿದ್ದೆವು. ಪಾಕ್ ಪರ ಘೋಷಣೆ ಕೂಗುವವರಿಗೆ ಇಲ್ಲಿ ಇರೋದಕ್ಕೆ ಯಾವುದೇ ಹಕ್ಕು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಘಟನೆಯನ್ನು ಭಜರಂಗದಳದ ಮೇಲೆ ಹಾಕುತ್ತಿದ್ದರು. ಭಜರಂಗದಳವರಿದ್ದರು ಅವರ ಕುಮ್ಮಕ್ಕಿದೆ ಎನ್ನುವಂತಹ ಅಯೋಗ್ಯರಿದ್ದಾರೆ. ಬಾಂಬ್ ಸ್ಪೋಟ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ‌ ಏನಿತ್ತು? ನಾನು ಖರ್ಗೆಯವರಿಗೆ ಹೇಳ್ತೀನಿ, ರಾಜಕಾರಣ ಮಾಡೋದ್ರಲ್ಲಿ ಮಾಡಲಿ. ಆದರೆ, ದೇಶದ ವಿಚಾರ ಬಂದಾಗ ಎಲ್ಲರು ಒಂದಾಗಬೇಕು ಎಂದು ಕುಟುಕಿದರು.

ರಾಮೇಶ್ವರಂ ಹೆಸರಿನ ಕೆಫೆ ಟಾರ್ಗೆಟ್

ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಎಲ್ಲರೂ ಒಂದಾಗಬೇಕು. ಶುಕ್ರವಾರದ ದಿನವೇ ರಾಮೇಶ್ವರಂ ಹೆಸರಿನ ಹೋಟೆಲ್​ ಅನ್ನು ಟಾರ್ಗೆಟ್ ಮಾಡಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಿದ ಬಳಿಕ ಹೀಗೆ ಮಾಡುತ್ತಿದ್ದಾರೆ. ಭಯೋತ್ಪಾದಕರು ನಾಶವಾಗುವ ಸಮಯ ಬಂದಿದೆ. ರೋಹಿಂಗ್ಯಾಗಳನ್ನ ಒಡೆದು ಓಡಿಸಿದಂತಹ ಕಾಲ ಬರುತ್ತೆ. ವಿಶೇಷ ಸೌಲಭ್ಯ ತೆಗೆಯಬೇಕು, ದೇಶದಲ್ಲಿ‌ ಸಮಾನ ನಾಗರಿಕ ಸಂಹಿತೆ ಬರಬೇಕು ಎಂದು ಶಾಸಕ ಯತ್ನಾಳ್ ಹೇಳಿದರು.

RELATED ARTICLES

Related Articles

TRENDING ARTICLES