ಬೆಂಗಳೂರು: ಇವರೇನು ಸತ್ಯ ಹರಿಶ್ಚಂದ್ರ ರಾಜನ ವಂಶಸ್ಥರ ? ಇವರಿಗ್ಯಾಕೆ ನಾವು ಆತ್ಮಸಾಕ್ಷಿಯಿಂದ ಮತಹಾಕಬೇಕು ಎಂದು ಬಿಜೆಪಿ ಪಕ್ಷದ ವಿರುದ್ದ ಶಾಸಕ ಲಕ್ಷ್ಮಣ ಸವಧಿ ಹೇಳಿದರು.
ವಿಧಾಸೌಧದಲ್ಲಿ ಇಂದು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಸಂಬಂಧ ಮತಚಲಾಯಿಸಲು ಬಂದ ವೇಳೆ ಮಾದ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂಬಂಧ ತಮ್ಮ ಪರ ಮತಚಲಾಯಿಸಲು ನನ್ನನ್ನು ಇದುವರೆಗೂ ಯಾರೊಬ್ಬರು ಸಂಪರ್ಕ ಮಾಡಿಲ್ಲ, ನಾನು ಕಾಂಗ್ರೆಸ್ ಚಿಹ್ನೆಯ ಮುಖಾಂತರ ಆಯ್ಕೆಯಾಗಿ ಬಂದಿದ್ದೇನೆ ನನ್ನನ್ನು ಯಾಕೆ ಸಂಪರ್ಕಿಸ್ತಾರೆ ಎಂದರು.
ಇದನ್ನೂ ಓದಿ: ಅಡ್ಡ ಮತದಾನ: ನನ್ನ ಆತ್ಮ ಸಾಕ್ಷಿಯಂತೆ ಮತಹಾಕಿದ್ದೇನೆ: ಎಸ್.ಟಿ ಸೋಮಶೇಖರ್
ಬಿಜೆಪಿ ಪಕ್ಷದ ಪರವಾಗಿ ನನ್ನನ್ನು ಮತಹಾಕುವಂತೆ ಯಾರೂ ಕೂಡ ಕೇಳುವ ಹಕ್ಕಿಲ್ಲ ಹಾಗು ಇದರ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು. ಜೆಡಿಎಸ್ ನವರು ತಮ್ಮ ಮತಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವ ಸಲುವಾಗಿ ತಮ್ಮ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ನಿಲ್ಲಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಅವರು ಹೇಳಿದರು.