Saturday, April 27, 2024

ಬಿಜೆಪಿ ನಾಯಕರೇ, ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡ್ತೀರಿ? : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಬಿಜೆಪಿ ನಾಯಕರು ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡ್ತೀರಿ? ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿಮ್ಮ ಅವಧಿಯಲ್ಲಿ 1.45 ಪೈಸೆ ಏರಿಕೆ ಮಾಡಲು ಅರ್ಜಿ ಹಾಕ್ಕೊಂಡಿದ್ದಿದ್ದು ನೀವು. ಈಗ ತರಾತುರಿಯಲ್ಲಿ ಪ್ರೊಟೆಸ್ಟ್ ಮಾಡ್ತಿದ್ದೀರಲ್ಲಾ ಆಗ ಪರಿಜ್ಞಾನ ಇರಲಿಲ್ವಾ ನಿಮಗೆ ಎಂದು ಛೇಡಿಸಿದ್ದಾರೆ.

ಈ ಪಕ್ಷಗಳು ಎಲ್ಲದಕ್ಕೂ ಅಪ್ಲಿಕೇಶನ್ ಹಿಡಿದುಕೊಂಡು ದೆಹಲಿಗೆ ಹೋಗಬೇಕು.ಈ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಈ ರೀತಿ ರಾಜ್ಯದ ಆಡಳಿತ ನಡೀತಿದೆ. ವಿದ್ಯುತ್ ಉಚಿತ ಷರತ್ತು ವಿಪರೀತ. ಜುಲೈ 7ಕ್ಕೆ ಹೊಸ ಬಜೆಟ್ ಬರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ, ಅನಗತ್ಯ ವಿದ್ಯುತ್ ಬಳಕೆಗೆ ಕುಮ್ಮಕ್ಕು ಕೊಡುತ್ತಿದೆ : ಸಿದ್ದರಾಮಯ್ಯ 

ಗ್ಯಾರಂಟಿ ಮಾಡ್ದೋರು ನೀವು, ಜನರನ್ನು ದಿಕ್ಕು ತಪ್ಪಿಸುತ್ತಿರೋದು ನೀವು. ಷರತ್ತು ಬಗ್ಗೆ ಆವಾಗ ಯಾಕೆ ಹೇಳಿಲ್ಲ? ಬಾಡಿಗೆದಾರರ ಪರಿಸ್ಥಿತಿ ಏನಾಗಬೇಕು? ಆವರೇಜ್ ಲೆಕ್ಕ ಹಾಕ್ತೀವಿ ಅಂತಾ ಹೇಳ್ತೀರಿ. ಮನೆ ಚೇಂಜ್ ಮಾಡಿದ್ರೆ ಅವ್ರು ಮಣ್ಣು ತಿನ್ನಬೇಕು. ನಾವು ಯುದ್ಧ ಮಾಡೋಕೆ ಇರೋದು. ಸ್ನೇಹಕ್ಕೂ ಸಿದ್ದ ಸಮರಕ್ಕೂ ಸಿದ್ದ ಅಂತೀರಾ? ನಾವು ಯುದ್ಧ ಮಾಡೋಕೆ ವಿಪಕ್ಷ ಸ್ಥಾನದಲ್ಲಿ ಇರೋದು ಅಂತೀರಾ? ಸುಮ್ ಸುಮ್ಮೆ ಯುದ್ಧ ಮಾಡೋದಲ್ಲ ಎಂದು ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ.

ಗ್ಯಾರೆಂಟಿಗಳನ್ನು ಎತ್ತಿಕಟ್ಟಿ ದುರ್ಬಳಕೆ ಮಾಡಲು ಹೊರಟಿದ್ದಾರೆ ಅಂತಾ ಸಿಎಂ ಹೇಳಿದ್ದಾರೆ. 200 ಯುನಿಟ್ ಕೊಡ್ತೀವಿ ಅಂತಾ ಹೇಳಿದ್ದು ನಾವಲ್ಲ. ಇಬ್ಬರೂ ಸೈನ್ ಹಾಕಿ ಕೊಟ್ಟಿದ್ದೀರಲ್ಲಾ. ನನಗೂ, ನಿನಗೂ 200 ಯುನಿಟ್ ಎಂದಿದ್ರಿ. ಈಗ ನಿಮಗೆ ಅರ್ಥ ಆಯ್ತಾ? ಮುಂದಿನ ಸಮಸ್ಯೆ ಏನು ಅಂತಾ ಯಾಕೆ ಯೋಚನೆ ಮಾಡಿಲ್ಲ. ಈ ಹಿಂದೆ ಇಂಧನ ಸಚಿವರು, ಸಿಎಂ ಯಾರಿದ್ದದ್ದು? ಆಗ ಪರಿಜ್ಞಾನ ಇರಲಿಲ್ವಾ? ಈಗ ಷರತ್ತು ಹಾಕಿದ್ದೀರಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES