Thursday, May 2, 2024

3ನೇ ದಿನಕ್ಕೆ ಕಾಲಿಟ್ಟ ಪಂಚರತ್ನ ರಥಯಾತ್ರೆ

ಕೋಲಾರ :  JDS ಪಕ್ಷದ ಪಂಚರತ್ನ ರಥಯಾತ್ರೆ 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಾಲೂರಿನಲ್ಲಿ JDS ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು, ಕೋಡಿಹಳ್ಳಿ‌ ಗೇಟ್​​​​​​ ಲಕ್ಕೂರುನಲ್ಲಿ‌ HDK ರಥಯಾತ್ರೆ ಸಾಗ್ತಿದೆ. ಮಾಲೂರಿನಲ್ಲಿ ಸಂಜೆ 5.45ಕ್ಕೆ ಮಾಜಿ ಸಿಎಂ H.D. ಮಾಜಿ ಸಿಎಂ ರೋಡ್ ಶೋ ನಡೆಸಲಿದ್ದಾರೆ.

ರಾತ್ರಿ‌ 7.15ಕ್ಕೆ ಶಿವಾರಪಟ್ಟಣದಲ್ಲಿ‌ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡ್ತಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ತಮ್ಮ 2 ನೇ ದಿನದ ಗ್ರಾಮ ವಾಸ್ತವ್ಯವನ್ನು ಹೂಡಿದ್ದರು.

ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಇಡೀ ಊರಿನ ತುಂಬಾ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಮನೆ ಮನೆಯ ಮುಂದೆಯೂ ರಂಗೋಲಿ, ಬಾಳೆ ಕಂಬಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ಗ್ರಾಮ ಸಭೆ ನಡೆಸಿದ್ರು.

RELATED ARTICLES

Related Articles

TRENDING ARTICLES