ಬೆಂಗಳೂರು: ವಿಧಾನಸೌಧ ಮೆಲ್ಮನೆಯಲ್ಲಿ ನಡೆದ ರಾಜಕೀಯ ರಾದ್ದಾಂತವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ರಾಜ್ಯದ ಇತಿಹಾಸದಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗುಂಡಾಗಿರಿಯನ್ನು ನಾನು ನೋಡಿಲ್ಲ ಎಂದು ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಬಾಗಿಲು ಹಾಕುವ ಮೂಲಕ ಚೇರ್ಮನ್ ತಡೆದಿದ್ದಾರೆ. ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರವಾಗಿದೆ. ಆದರೆ ಸಬಾಪತಿ ಇರುವಾಗ ಉಪಸಭಾಪತಿ ಕುರಿಸುವುದು ನಿಯಮ ಬಾಹಿರವಾಗಿದೆ. ಸಭಾಪತಿಗೆ ಎನಾದರೂ ಸಮಸ್ಯ ಇದ್ದಾಗ ಮಾತ್ರ ಉಪಸಭಾಪತಿ ಕೂರಬೇಕು ಎಂದು ಹೇಳಿದರು. ಇದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಾನೂನು ಬಾಹಿರವಾಗಿದ್ದು, ಇದು ಬಿಜೆಪಿಯ ಕಾನೂನು ಬಾಹಿರ ನಡೆಯಾಗಿದೆ. ಜೊತೆಗೆ ಸದಸನದ ಈ ಗೂಂಡಾಗಿರಿಗೆ ಜೆಡಿಎಸ್ ಕೂಡ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.