Monday, October 28, 2024

ಸರ್ಕಾರ ಅವಕಾಶ ಕೊಡದಿದ್ದರೂ ಆ.22 ರಂದು ಗಣಪತಿ ಪ್ರತಿಷ್ಟಾಪನೆ : ಶ್ರೀರಾಮಸೇನೆ

ಗದಗ : ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಬೇಕು  ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದರು.

 ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದುವರೆಗೂ ಗಣಪತಿ ಪ್ರತಿಷ್ಟಾಪನೆ ಕುರಿತು ಯಾವ ನಡುವಳಿಕೆಗಳನ್ನ ಬಿಡುಗಡೆ ಮಾಡಿಲ್ಲ. ಪೊಲೀಸ್ ಇಲಾಖೆಯ ಮೂಲಕ ಗಣಪತಿ ಮಹಾಮಂಡಳಿಗಳನ್ನ ಹತ್ತಿಕ್ಕುವ ಕೆಲಸ ಮಾಡ್ತಿದೆ ಅಂತ ಆರೋಪಿಸಿದರು. ಬಾರ್ ಗಳನ್ನ ಓಪನ್ ಮಾಡುವುದಕ್ಕೆ ಸರಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡುತ್ತೆ. ಆದ್ರೆ ಗಣಪತಿ ಪ್ರತಿಷ್ಟಾಪನೆ ಮಾಡಲು ಹಿಂದೇಟು ಹಾಕುತ್ತೆ. ಜಿಲ್ಲಾಧಿಕಾರಿಗಳ ಮೂಲಕ, ಪೊಲೀಸ್ ಇಲಾಖೆಯ ಮೂಲಕ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ನಿಷೇಧ ಮಾಡಲಾಗಿದೆ ಅಂತ ತಿಳಿಸುತ್ತಿದ್ದಾರೆ. ಹೀಗಾಗಿ ಸೋಮವಾರದಂದು ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಅಂತ ತಿಳಿಸಿದರು. ಇನ್ನು ಒಂದು ವೇಳೆ ಮಾರ್ಗಸೂಚಿ ಬಿಡುಗಡೆ ಮಾಡಿ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ಕೊಡದಿದ್ದಲ್ಲಿ 22 ರಂದು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಟಾಪನೆ ಮಾಡ್ತೇವೆ. ಬೇಕಾದರೆ ನಮ್ಮನ್ನ ಜೈಲಿಗೆ ಹಾಕಿದ್ರೂ ಸರಿ, ಇಲ್ಲ ಕೇಸ್ ಹಾಕಿದರೂ ಸರಿ ಹಿಂಜರಿಯಲ್ಲ ಅಂದರು.

 

RELATED ARTICLES

Related Articles

TRENDING ARTICLES