Monday, October 28, 2024

ಸಿಎಂ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಟ್ಟ | ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ

ಬೆಂಗಳೂರು :  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಪಕ್ಷದಲ್ಲಿ ಬಡ್ತಿ ಪಡೆದಿದ್ದಾರೆ.

ವಿಜಯೇಂದ್ರ ಅವರಲ್ಲದೆ  ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ತೇಜಸ್ವಿನಿ ಅನಂತ್​ ಕುಮಾರ್​​ನಿರ್ಮಲ್​ ಕುಮಾರ್​ ಸುರಾನಾ, ಮಾಲೀಕಯ್ಯ ಗುತ್ತೇದಾರ್, ಪ್ರತಾಪ್​ ಸಿಂಹ, ಎಂ.ಬಿ. ನಂದೀಶ್, ಎಂ ಶಂಕ್ರಪ್ಪ, ಎಂ ರಾಜೇಂದ್ರ​  ಕೂಡ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ 

ರಾಜ್ಯ ಉಪಾಧ್ಯಕ್ಷರು: ಬಿ.ವೈ. ವಿಜಯೇಂದ್ರ, ಅರವಿಂದ ಲಿಂಬಾವಳಿ, ನಿರ್ಮಲ್‌ ಕುಮಾರ್‌ ಸುರಾನ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್‌, ತೇಜಸ್ವಿನಿ ಅನಂತ ಕುಮಾರ್‌, ಪ್ರತಾಪಸಿಂಹ, ಎಂ.ಬಿ. ನಂದೀಶ್‌,  ಎಂ. ಶಂಕರಪ್ಪ, ಎಂ. ರಾಜೇಂದ್ರ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್‌. ರವಿಕುಮಾರ್‌, ಸಿದ್ದರಾಜು, ಅಶ್ವತ್ಥ ನಾರಾಯಣ, ಮಹೇಶ್‌ ಟೆಂಗಿನಕಾಯಿ.

ರಾಜ್ಯ ಕಾರ್ಯದರ್ಶಿಗಳು: ಸತೀಶ್‌ ರೆಡ್ಡಿ, ತುಳಸಿ ಮುನಿರಾಜುಗೌಡ, ಎಸ್‌. ಕೇಶವ ಪ್ರಸಾದ್‌, ಜಗದೀಶ್‌ ಹಿರೇಮನಿ, ಸುಧಾ ಜಯರುದ್ರೇಶ್‌, ಭಾರತಿ ಮಗ್ದುಂ, ಹೇಮಲತಾ ನಾಯಕ್‌, ಉಜ್ವಲಾ ಬಡವಣ್ಣಾಚೆ, ಕೆ.ಎಸ್‌. ನವೀನ್‌, ವಿನಯ್‌ ಬಿದರೆ.

ರಾಜ್ಯ ಖಜಾಂಚಿ : ಸುಬ್ಬ ನರಸಿಂಹ, ಲೆಹರ್‌ ಸಿಂಗ್‌ ಸಿರೋಯಾ; ರಾಜ್ಯ ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್‌ ಅಂಬೇಕಲ್ಲು; ರಾಜ್ಯ ವಕ್ತಾರರು: ಕ್ಯಾ| ಗಣೇಶ್‌ ಕಾರ್ಣಿಕ್‌; ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್‌, ಡಾ| ಎ.ಎಚ್‌. ಶಿವಯೋಗಿಸ್ವಾಮಿ

ಮೋರ್ಚಾ ಅಧ್ಯಕ್ಷರು

ಯುವ ಮೋರ್ಚಾ : ಡಾ| ಸಂದೀಪ್‌
ಮಹಿಳಾ ಮೋರ್ಚಾ : ಗೀತಾ ವಿವೇಕಾನಂದ
ರೈತ ಮೋರ್ಚಾ : ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ : ಅಶೋಕ್‌ ಗಸ್ತಿ
ಎಸ್‌.ಸಿ. ಮೋರ್ಚಾ : ಚಲವಾದಿ ನಾರಾಯಣಸ್ವಾಮಿ
ಎಸ್‌.ಟಿ. ಮೋರ್ಚಾ : ತಿಪ್ಪರಾಜು ಹವಾಲ್ದಾರ್‌
ಅಲ್ಪಸಂಖ್ಯಾಕರ ಮೋರ್ಚಾ : ಮುಜಾಂಮಿಲ್‌ ಬಾಬು.

 

RELATED ARTICLES

Related Articles

TRENDING ARTICLES