Monday, October 28, 2024

ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ ; ಸಿಎಂ ನಿರ್ಧಾರ ಬದಲಿಸಲು ಕಾರಣ ಏನ್ ಗೊತ್ತಾ?

ಬೆಂಗಳೂರು :  ಆಗಸ್ಟ್ 2ನೇ ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಸಂಪುಟ ವಿಸ್ತರಣೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ರು. ಆದರೆ, ಸದ್ಯ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆಯಾಗಲಿ ಇಲ್ಲ.

ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್​ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಒಪ್ಪಿದೆ. ಆದರೆ, ಅವರಿಬ್ಬರ ಜೊತೆಗೆ ಉಳಿದ ಸ್ಥಾನಗಳನ್ನೂ ಬರ್ತಿ ಮಾಡುವುದಾದರೆ ಸ್ವಲ್ಪ ಕಾಯಿರಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಹೈಕಮಾಂಡ್ ಈ ನಿರ್ಧಾರದಿಂದ, ಸದ್ಯ ಅವರಿಬ್ಬರನ್ನೇ ಮಂತ್ರಿಗಳನ್ನಾಗಿ ಮಾಡಿದ್ರೆ ಸ್ವಪಕ್ಷೀಯರ ಅಸಮಧಾನಕ್ಕೆ ಕಾರಣವಾಗಲಿದೆ. ಹಾಗಾಗಿ ಬಿಎಸ್​ವೈ ಸದ್ಯಕ್ಕೆ ಸಂಪುಟ ವಿಸ್ತರಣೆಯನ್ನು ಕೈಬಿಟ್ಟಿದ್ದು, ಹೈಕಮಾಂಡ್ ಗ್ರೀನ್​ ಸಿಗ್ನಲ್​ ಬರೋವರೆಗೆ ಕಾಯಲಿದ್ದಾರೆ.

RELATED ARTICLES

Related Articles

TRENDING ARTICLES