ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕೇವಲ 3೦ ಸೆಕೆಂಡ್ 6೦ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಕತರ್ನಾಕ್ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಮಾದನಾಯಕನಹಳ್ಳಿಯ ಲಕ್ಷ್ಮೀಪುರದಲ್ಲಿ ಈ ಘಟನೆ ನಡೆದಿದೆ. ಸಿನಿಮಾ ಸ್ಟೈಲ್ನಲ್ಲಿ ಚಿನ್ನಾಭರಣ ಅಂಗಡಿ ಒಳಗೆ ಪ್ರವೇಶಿಸಿದ ಖತರ್ನಾಕ್ ದರೋಡೆಕೋರರು ಗನ್ ತೋರಿಸಿ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಬಂಧಿಸಿದ ಸಿಬಿಐ
ಘಟನೆಯ ಹಿನ್ನೆಲೆ?
ಲಕ್ಷ್ಮೀಪುರದಲ್ಲಿರುವ ಪದಮ್ ಜ್ಯೂವೆಲರಿ ಶಾಪ್ ನಲ್ಲಿ ಕಳೆದ ರಾತ್ರಿ 9.15ರ ಸುಮಾರಿನಲ್ಲಿ ಸಿನಿಮೀಯ ರೀತಿಯಲ್ಲಿ ಪ್ರವೇಶ ಮಾಡಿದ ಕಳ್ಳರು ಗನ್ ತೋರಿಸಿ ಬೆದರಿಸಿದ್ದಾರೆ. ಇವರದಲ್ಲಿ ಒಬ್ಬ ಹೊರಗಡೆ ಬೈಕ್ನಲ್ಲಿ ಕುಳಿತಿದ್ದರೇ ಮತ್ತೊಬ್ಬ ಗನ್ ಹಿಡಿದು ಅಂಗಡಿಯವರನ್ನು ಹೆದರಿಸಿದ್ದಾನೆ, ಇನ್ನೊಬ್ಬ ಮಳಿಗೆಯಲ್ಲಿದ್ದ ಸುಮಾರು 55 ರಿಂದ 60 ಲಕ್ಷ ಮೌಲ್ಯದ ಸುಮಾರು 750 ಗ್ರಾಂ ಚಿನ್ನಾಭರಣಗಳನ್ನು ಕೇವಲ 30 ಸೆಕೆಂಡ್ಗಳಲ್ಲಿ ಕದ್ದು ಪರಾರಿಯಾಗಿದ್ದಾರೆ. ಕಳ್ಳತನದ ಸಂಪೂರ್ಣ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸಸ್ ಠಾಣೆಯಲ್ಲಿ ದೂರು ದಾಖಲಾಗಿದೆ.